ಕೆಲವು ಪುರಾಣಗಳ ಕಥೆಯಂತೆ ಅಗ್ನಿದೇವನೇ ಅಗಸ್ತö್ಯರಾಗಿ ಹುಟ್ಟಿದುದೆಂದು ತಿಳಿದು ಬರುವುದು. ದೇವತೆಗಳಿಗೂ ರಾಕ್ಷಸರಿಗೂ ಯಾವಾಗಲೂ ವೈರ. ಇದರಿಂದ ಯುದ್ಧ ನಡೆಯುತ್ತಲೇ ಇತ್ತು. ಹೀಗೊಮ್ಮೆ ದೇವತೆಗಳು ರಾಕ್ಷಸರೊಡನೆ ಯುದ್ಧ ಮಾಡುತ್ತಿರುವಾಗ, ಇಂದ್ರನು ಅಗ್ನಿ-ವಾಯು ಇಬ್ಬರನ್ನೂ ಕರೆದು “ನೀವು ರಾಕ್ಷಸರ ಮೇಲೆ ಯುದ್ಧ ಮಾಡಿ ಅವರನ್ನು ಕೊಂದು ಬನ್ನಿ” ಎಂದು ಆಜ್ಞಾಪಿಸುವನು. ಅದರಂತೆ ಅಗ್ನಿ-ವಾಯು ಇಬ್ಬರೂ ರಾಕ್ಷಸರ ಮೇಲೆ ಯುದ್ಧ ಮಾಡಿ ಅನೇಕ ರಾಕ್ಷಸರನ್ನು ಕೊಂದರು. ಕೆಲವರು ಪ್ರಾಣ ಉಳಿಸಿಕೊಳ್ಳಲು ಸಮುದ್ರದೊಳಗೆ ಅಡಗಿ ಕುಳಿತರು. ಆಗ ಅಗ್ನಿ-ವಾಯು ಇಬ್ಬರೂ ಸಹ ‘ಸಮುದ್ರದೊಳಗೆ ಅಡಗಿರುವ ಅಳಿದುಳಿದ ರಾಕ್ಷಸರು ತೊಂದರೆ ಮಾಡಲು ಅಶಕ್ತರಾಗಿದ್ದಾರೆ’ ಎಂದು ಭಾವಿಸಿ ಸ್ವರ್ಗಕ್ಕೆ ಹಿಂದಿರುಗಿದರು. ದೇವೇಂದ್ರನು ವಿಷಯವನ್ನು ತಿಳಿದು, ಅಗ್ನಿ-ವಾಯು ಇಬ್ಬರೂ ರಾಕ್ಷಸರನ್ನು ಸಂಪೂರ್ಣವಾಗಿ ಕೊಂದು ಬಂದಿಲ್ಲ ಎಂದು ಕೋಪಗೊಂಡು ಅವರನ್ನು ಕರೆದು ‘ಮತ್ತೆ ನೀವಿಬ್ಬರೂ ಸಮುದ್ರದೊಳಗೆ ಹೊಕ್ಕು ಅಲ್ಲಿ ಅಡಗಿರುವ ರಾಕ್ಷಸರನ್ನೆಲ್ಲ ಕೊಂದು ಬನ್ನಿ' ಎಂದು ಆಜ್ಞಾಪಿಸಿದನು. ಆಗ ಅವರಿಬ್ಬರೂ “ದೇವೇಂದ್ರನೇ! ಸಮುದ್ರದಲ್ಲಿ ಅನೇಕ ಜೀವಿಗಳು ವಾಸಮಾಡುತ್ತಿವೆ. ಅವುಗಳಿಂದ ಯಾರಿಗೂ ತೊಂದರೆಯಾಗುತ್ತಿಲ್ಲ. ಆದ್ದರಿಂದ ನಾವು ಸಮುದ್ರವನ್ನು ಶೋಷಿಸಿದರೆ, ಅವುಗಳು ಸಾಯುತ್ತವೆ. ಇದು ಉಚಿತವಲ್ಲ” ಎಂದು ದೇವೇಂದ್ರನಿಗೆ ಹೇಳಿದರು. ಆದರೆ ಅವರ ಮಾತನ್ನು ಕೇಳದ ದೇವೇಂದ್ರನು ಕೋಪಗೊಂಡು “ದುಷ್ಟರ ನಾಶ ಹೇಗಾದರೂ ಆಗಲೇಬೇಕು. ಇಲ್ಲಿ ನ್ಯಾಯ-ಅನ್ಯಾಯದ ಪ್ರಶ್ನೆಯಿಲ್ಲ. ಎಲೈ ಅಗ್ನಿ-ವಾಯುಗಳೇ ! ನೀವಿಬ್ಬರೂ ನಾನು ಹೇಳಿದ ಕಾರ್ಯವನ್ನು ಪೂರ್ಣವಾಗಿ ಮಾಡದೆ, ಕರ್ತವ್ಯಚ್ಯುತರಾಗಿ ನನಗೇ ಧರ್ಮಬೋಧನೆ ಮಾಡುತ್ತಿರುವಿರಿ. ನೀವಿಬ್ಬರೂ ಈಗಲೇ ಭೂಲೋಕದಲ್ಲಿ ಹುಟ್ಟಿರಿ. ಅಲ್ಲಿ ಧರ್ಮದ ಚರ್ಚೆಯನ್ನು ನಡೆಸಿರಿ” ಎಂದು ಅಗ್ನಿ-ವಾಯು ಗಳಿಗೆ ಶಾಪ ನೀಡಿದನು. ಹಾಗೆಯೇ ಅಗ್ನಿಯನ್ನು ಕುರಿತು, ಭೂಲೋಕದಲ್ಲಿ ಹುಟ್ಟಿದ ನೀನು ಸಮುದ್ರವನ್ನು ಪಾನ ಮಾಡು ಎಂದೂ ಹೇಳಿದನು.
ದೇವೇಂದ್ರನ ಶಾಪದಂತೆ, ಅಗ್ನಿ-ವಾಯು ಇಬ್ಬರೂ ಭೂಲೋಕದಲ್ಲಿ ಕ್ರಮವಾಗಿ ಅಗಸ್ತö್ಯ ಮತ್ತು ವಸಿಷ್ಠರಾಗಿ ಹುಟ್ಟಿದರು. ಅಗ್ನಿಯು ಅಗಸ್ತö್ಯನಾಗಿ ಹುಟ್ಟಿದ ಮೇಲೆ ಮುಂದೊAದು ದಿನ ಸಮುದ್ರವನ್ನು ಕುಡಿದು ಅಲ್ಲಡಗಿದ್ದ ರಾಕ್ಷಸರ ನಾಶಕ್ಕೆ ಮಹತ್ತರ ಸಹಾಯ ಮಾಡಿದರು. ಲೋಕೋತ್ತರ ಸಾಮರ್ಥ್ಯವುಳ್ಳ ಪರೋಪಕಾರಿಗಳಾದ ಮಹಾತ್ಮರ ಮಹಿಮೆ ಅಗಾಧವಾದುದು ಎಂಬದರ ದ್ಯೋತಕವೇ ಈ ಚರಿತ್ರೆ.
ಒಮ್ಮೆ ಅಗಸ್ಯರು ಆಪಸ್ತಂಬ ಮಹರ್ಷಿಗಳನ್ನು ನೋಡಲು ಅವರ ಆಶ್ರಮಕ್ಕೆ ಹೋದರು. ಆಪಸ್ತಂಬರು ಬ್ರಹ್ಮ-ವಿಷ್ಣು-ಮಹೇಶ್ವರರಲ್ಲಿ ಶ್ರೇಷ್ಠನಾದ ದೇವತೆ ಯಾರೆಂದು ಅಗಸ್ತö್ಯರನ್ನು ಪ್ರಶ್ನಿಸಿದಾಗ-“ಈ ಮೂವರೂ ಆಕಾರದಲ್ಲಿ ಬೇರೆ. ಆದರೆ ಮೂವರೂ ಸೇರಿ ಒಂದೇ ಶಕ್ತಿ. ಬೇರೆಯಲ್ಲ. ಹೀಗಾಗಿ ಶ್ರೇಷ್ಠರು ಯಾರು ಎಂಬ ಪ್ರಶ್ನೆಯೇ ಬರುವುದಿಲ್ಲ” ಎಂದು ಅಗಸ್ತö್ಯರು ಆಪಸ್ತಂಬರಿಗೆ ಉತ್ತರ ಕೊಟ್ಟರು.
ಚಂದ್ರವAಶದ ರಾಜ ಮಣಿಭದ್ರ. ಅವನ ಹೆಂಡತಿ ಕವಿಕಾ. ಇವರಿಬ್ಬಗೆ ಅನೇಕ ಮಕ್ಕಳು ಹುಟ್ಟಿದರು. ಅವರಲ್ಲಿ ಏಳು ಜನ ಮಾಯಾ ವಿದ್ಯೆಯನ್ನು ಕಲಿತರು. ಅವರು ಒಂದು ದೊಡ್ಡ ನಾಗರಹಾವನ್ನು ಸೃಷ್ಟಿ ಮಾಡಿ ಅದರೊಡನೆ ಪ್ರಪಂಚದಲ್ಲಿ ಸುತ್ತುತ್ತಾ ಋಷ್ಯಮೂಕ ಪರ್ವತದ ಬಳಿ ಬಂದರು. ಎದುರಿಗೆ ಅಗಸ್ತö್ಯರು ಬರುತ್ತಿರುವುದನ್ನು ಕಂಡು ಅವರನ್ನು ತಮಾಷೆ ಮಾಡಬೇಕೆಂದು ಆ ಹಾವನ್ನು ಗುಂಡಗೆ ಸುತ್ತಿ ನೆಲದ ಮೇಲಿಟ್ಟು, ಅದರ ಸುತ್ತಲೂ ಈ ಏಳು ಜನರೂ ಎತ್ತರವಾದ ಸಾಲ ವೃಕ್ಷದಂತೆ ಅಗಸ್ತö್ಯರಿಗೆ ಅಡ್ಡಲಾಗಿ ನಿಂತರು. ಅಗಸ್ತö್ಯರು ತಮ್ಮ ಯೋಗ ದೃಷ್ಟಿಯಿಂದ ಇವರ ತಂತ್ರವನ್ನರಿತು, “ನೀವು ಹೀಗೆಯೇ ಸಾಲ ವೃಕ್ಷ ಗಳಾಗಿಯೇ ಬಹು ಕಾಲದವರೆಗೆ ನಿಂತಿರಿ" ಎಂದು ಶಾಪ ಕೊಟ್ಟರು, ಪಶ್ಚಾತ್ತಾಪಗೊಂಡ ರಾಜಕುಮಾರರು ಅಗಸ್ತö್ಯರನ್ನು ಬೇಡಲು ಆಗ ಅಗಸ್ತö್ಯರು “ಮುಂದೆ ಶ್ರೀರಾಮನು ವನವಾಸ ಮಾಡುವಾಗ ಇಲ್ಲಿ ಬಂದು ಒಂದೇ ಬಾಣದಿಂದ ಈ ಏಳು ಸಾಲು ಮರಗಳನ್ನು ಹೊಡೆದುರುಳಿಸುವನು. ಆಗ ನಿಮಗೆ ನಿಜರೂಪವು ಬರುವುದು’’ ಎಂದು ವಿಶಾಪವನ್ನಿತ್ತರು. ಅದರಂತೆ ಮುಂದೆ ಅವರಿಗೆ ಶಾಪ ವಿಮೋಚನೆಯಾಯಿತು.
ತಮಿಳು ಭಾಷಾಜನಕ
ಅಗಸ್ತö್ಯರು ಭಾರತದ ಉತ್ತರ-ದಕ್ಷಿಣದ ಎಲ್ಲ ಆಶ್ರಮಗಳಿಗೂ ಹೋಗಿ ಅಲ್ಲಿರುವ ಅನೇಕ ಮಹರ್ಷಿಗಳ ಸಂದರ್ಶನವನ್ನು ಮಾಡಿದವರು. ಅವರು ತಮ್ಮ ತಪೋಮಹಿಮೆಯಿಂದ ಮಾಡಿದ ಅದ್ಭುತ ಕಾರ್ಯಗಳನ್ನು ಜನರು ಈಗಲೂ ಕೊಂಡಾಡುವರು. ಇವರನ್ನು ಪುರಾಣಗಳಲ್ಲಿ ಕುಳ್ಳ ಮುನಿಯೆಂದೇ ವರ್ಣಿಸಲಾಗಿದೆ. ಇವರು ಪರಶಿವನ ಮತ್ತು ಷಣ್ಮುಖನ ಪರಮ ಭಕ್ತರು. ಇವರು ಶಿವ-ಷಣ್ಮುಖರ ಆಣತಿಯಂತೆ ತಮಿಳು ಭಾಷೆಯನ್ನು ಲೋಕದಲ್ಲಿ ಪ್ರಚಾರ ಮಾಡಿದವರೆಂದು ತಮಿಳು ಸಾಹಿತ್ಯದಲ್ಲಿ ಪ್ರಸಿದ್ಧವಾಗಿದೆ. ತಮಿಳು ಭಾಷೆಯ ಜನಕರು ಅಗಸ್ತö್ಯರು ಎಂದು ತಮಿಳು ಜನರು ಬಹು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಇವರು ಅನೇಕ ಕಡೆ ಶಿವಲಿಂಗಗಳನ್ನು ಸ್ಥಾಪಿಸಿದರೆಂದು ಐತಿಹ್ಯವುಂಟು. ಕನ್ನಡ ನಾಡಿನಲ್ಲೂ ಇವರು ಸ್ಥಾಪಿಸಿದ ಶಿವಲಿಂಗಗಳು ಕೆಲವೆಡೆ ಇವೆಯೆಂದು ಪ್ರತೀತಿಯುಂಟು. ದಕ್ಷಿಣ ದೇಶಕ್ಕೆ ಬಂದ ಮೊಟ್ಟ ಮೊದಲ ಋಷಿಗಳು ಅಗಸ್ತö್ಯರು. ಹೀಗಾಗಿ ದಕ್ಷಿಣ ದಿಕ್ಕನ್ನು ಅಗಸ್ತö್ಯ ದಿಕ್ಕೆಂದು ಕರೆಯುವ ವಾಡಿಕೆಯುಂಟು.ಅಗಸ್ತö್ಯರು ತಮಿಳು ಭಾಷೆಯಲ್ಲಿ ಸಂಗೀತಕ್ಕೆ ಸಂಬAಧಿಸಿದ ಗ್ರಂಥ ವನ್ನೂ ವ್ಯಾಕರಣವನ್ನು ಹಾಗೂ ಕೆಲವು ತಮಿಳು ನಾಟಕಗಳನ್ನೂ, ತಮಿಳು ಸಾಹಿತ್ಯ ಕೃತಿಗಳನ್ನೂ ರಚಿಸಿದ್ದಾರೆಂದು ತಿಳಿದು ಬರುವುದು, ತೋಲ್ಕಾಪ್ಯಮ್ ಎನ್ನುವುದು ತಮಿಳಿನಲ್ಲಿ ಅತ್ಯಂತ ಪ್ರಾಚೀನವಾದ ವ್ಯಾಕರಣ ಗ್ರಂಥವೆAದು ಪ್ರಸಿದ್ಧಿ ಪಡೆದಿದೆ. ಇದನ್ನು ಬರೆದವರು ತೋಲ್ಕಾಪ್ಯರ್ ಎನ್ನುವರು. ಇವರು ಅಗಸ್ತö್ಯರ ಹನ್ನೆರಡು ಜನ ಶಿಷ್ಯರಲ್ಲಿ ಒಬ್ಬರು. ತಮಿಳಿನ ಕಂಬ ರಾಮಾಯಣದಲ್ಲಿ ಅಗಸ್ತö್ಯರ ಬಗ್ಗೆ ಅನೇಕ ವಿಷಯಗಳು ಸೂಚಿತವಾಗಿವೆ. ಇವತ್ತಿಗೂ ತಮಿಳುನಾಡಿನ ಅನೇಕ ದೇವಾಲಯಗಳಲ್ಲಿ ಅಗಸ್ತö್ಯರನ್ನು ಪೂಜಿಸುವುದೂ ಕಂಡು ಬರುತ್ತದೆ. ತಮಿಳು ಭಾಷೆಯನ್ನು ಲೋಕಕ್ಕೆ ಕೊಟ್ಟವರು ಅಗಸ್ತö್ಯರೆಂದು ಶ್ರೇಷ್ಠ ತಮಿಳು ಗ್ರಂಥಕಾರ ವಿಲ್ಲಿಪುತ್ತುರನ್ ತಿಳಿಸುವನು.
ಅಗಸ್ತö್ಯರು ಜಗತ್ತಿಗೆ ಅನೇಕ ಶಿಷ್ಯರನ್ನು ನೀಡಿದ್ದಾರೆ. ಅನೇಕ ವೇದಮಂತ್ರಗಳನ್ನು ಇವರು ಕಂಡಿದ್ದರೆAದು ತಿಳಿಸಲಾಗಿದೆ. ಲಲಿತಾ ಸಹ್ರಸನಾಮದ ಅಪ್ರತಿಮ ಕೊಡುಗೆ ನೀಡಿದವರು ಅಗಸ್ತö್ಯರು. ಇವರು ಮಂತ್ರಶಾಸ್ತç ತಂತ್ರಶಾಸ್ತç ಗಳೆರಡನ್ನೂ ಬಲ್ಲವರಾಗಿದ್ದರು. ಇಂತಹ ಮಹಾ ಮಹಿಮರು ನೀಡಿದ ಜ್ಞಾನಾಮೃತವನ್ನು ಸವಿಯೋಣ, ನಮ್ಮ ಋಷಿ ಪರಂಪರೆಯ ಬಗ್ಗೆ ಹೆಮ್ಮೆಪಟ್ಟು, ಋಷಿಗಳ ಜ್ಞಾನದಿಂದ ಭಾರತವನ್ನು ಜಗದ್ಗುರುವಾಗಿಸೋಣ.
ಲಲಿತಾ ಸಹಸ್ರನಾಮದ ಮಹತ್ವ
ವಿಶೇಷ ಶಕ್ತಿ ಮತ್ತು ಅಧಿಕ ಪ್ರಾಮುಖ್ಯತೆಯನ್ನು ಹೊಂದಿರುವ ಮಂತ್ರ ವೆಂದರೆ ಅದುವೇ ಶ್ರೀ ಲಲಿತಾ ಸಹಸ್ರನಾಮ. ಶ್ರೀ ಲಲಿತಾ ಸಹಸ್ರನಾಮವನ್ನು ಪ್ರತಿನಿತ್ಯ ಅದರಲ್ಲೂ ಶುಕ್ರವಾರ ತಪ್ಪದೇ ಪಠಿಸಬೇಕು. ಲಲಿತಾ ಸಹಸ್ರನಾಮ ವನ್ನು ಪಠಿಸುವುದರಿಂದ ಶ್ರೀಮಾತೆಯ ಪೂರ್ಣ ರೂಪದ ವರ್ಣನೆ ಮೂಲಕ ಸಾಕ್ಷಾತ್ ಸ್ವÀರೂಪದ ಅರಿವಾಗುತ್ತದೆ. ಆಕೆಯ ಮೂಲ ಚಕ್ರಗಳ ಜಾಗೃತಿಯಾಗುತ್ತದೆ. ಶ್ರೀ ಲಿಲಿತಾ ಸಹಸ್ರನಾಮ ಎನ್ನುವುದು ಬ್ರಹ್ಮಪುರಾಣದ ಒಂದು ಪಠ್ಯ, ಲಲಿತಾ ಆನಂದ ದೇವತೆ, ಈಕೆ ಪರಶಿವನ ಪತ್ನಿ ಪಾರ್ವತಿ ದೇವಿಯ ರೂಪ. ಶ್ರೀ ಲಲಿತಾ ಸಹಸ್ರನಾಮ ಅತ್ಯಂತ ಪವಿತ್ರವಾದ ಮಂತ್ರವಾಗಿದೆ. ಭಗವಾನ್ ಹಯಗ್ರೀವ ಮತ್ತು ಅಗಸ್ತö್ಯ ಮುನಿಗಳ ಚರ್ಚೆಯಿಂದ ಹೊರಹೊಮ್ಮಿದ ಮಂತ್ರವೇ ಶ್ರೀ ಲಿಲತಾ ಸಹಸ್ರನಾಮ. ಇದು ಅತ್ಯಂತ ಶಕ್ತಿಯುತವಾದ ಮಂತ್ರವಾಗಿದೆ. ಹಾಗೂ ಲಲಿತಾ ದೇವಿಯ ಅತ್ಯಂತ ನೆಚ್ಚಿನ ಮಂತ್ರವಾಗಿದೆ. (ಅಗಸ್ತö್ಯರ ಚರಿತ್ರೆ ಮುಕ್ತಾಯ)
-ಜಿ. ರಾಜೇಂದ್ರ
ಆಧುನಿಕ ತಂತ್ರಜ್ಞರೂ ಹೌದು...
ಮೊದಲ ವಿದ್ಯುತ್ತನ್ನು ಕಂಡುಹಿಡಿದಿದ್ದು ಬೆಂಜಮಿನ್ ಫ್ರಾಂಕ್ಲಿನ್ ಎಂದು ಹೇಳುತ್ತೇವೆ. ಇದೇ ಬೆಂಜಮಿನ್ ತಾವು ಬರೆದ ಒಂದು ಪುಸ್ತಕದಲ್ಲಿ ಹೇಳುತ್ತಾರೆ. "ಒಂದು ರಾತ್ರಿ ನಾನು ಒಂದು ಪುಸ್ತಕವನ್ನು ಓದಿದೆ. ಅದರಲ್ಲಿನ ಒಂದು ವಾಕ್ಯ ರಾತ್ರಿಯಿಡೀ ನನ್ನನ್ನು ಕಾಡುತ್ತಿತ್ತು. ಯೋಚಿಸಿ, ಯೋಚಿಸಿ ಆ ವಾಕ್ಯದ ಅರ್ಥವನ್ನು ಗ್ರಹಿಸಿದೆ. ಅದು ವಿದ್ಯುತ್ತನ್ನು ಕಂಡು ಹಿಡಿಯಲು ನೆರವಾಯಿತು"
ಹಾಗಾದರೆ ಆ ವಾಕ್ಯ ಯಾವುದು ? ಅದು ಅಗಸ್ತö್ಯ ಮುನಿಗಳು ಬರೆದ ‘‘ಅಗಸ್ತö್ಯ ಸಂಹಿತೆ’’ಯದಾಗಿತ್ತು...!!! ಮಹರ್ಷಿ ಅಗಸ್ತö್ಯರು ರಾಜ ದಶರಥನ ರಾಜಗುರುವಾಗಿದ್ದರು. ಸಪ್ತರ್ಷಿಗಳಲ್ಲಿ ಒಬ್ಬರಾಗಿದ್ದಾರೆ. ಅವರು "ಅಗಸ್ತö್ಯ ಸಂಹಿತಾ" ಎಂಬ ಗ್ರಂಥವನ್ನು ಬರೆದಿದ್ದಾರೆ. ಆಶ್ಚರ್ಯಕರ ಸಂಗತಿಯೇನೆAದರೆ ಅಗಸ್ಯ ಸಂಹಿತೆಯಲ್ಲಿ ವಿದ್ಯುತ್ ಉತ್ಪಾದನೆಗೆ ಸಂಬAಧಿಸಿದ ಅನೇಕ ವಿಷಯಗಳಿವೆ. !
ಈ ಶ್ಲೋಕಗಳನ್ನು ನೋಡಿ.
ಸಂಸ್ಥಾಪ್ಯ ಮೃಣ್ಮಯೇ ಪಾತ್ರೇ
ತಾಮ್ರಪತ್ರಂ ಸುಸಂಸ್ಕೃತಮ್ |
ಛಾದಯೇಚ್ಛಿಖಗ್ರೀವೇಣ
ಚಾರ್ದಾಭಿಃ ಕಾಷ್ಠಪಾಂಸುಭಿಃ ||
ದಾಸ್ತಾಲೋಷ್ಟೋ ನಿಧಾತ್ವಯಃ ಪಾರದಾಛಾದಿತಸ್ತತಃ|
ಸಂಯೋಗಾಜ್ಜಾಯತೇ ತೇಜೋ ಮಿತ್ರಾವರುಣ ಸಂಜ್ಞಿತಮ್||
ಒAದು ಮಣ್ಣಿನ ಪಾತ್ರೆಯನ್ನು ತೆಗೆದುಕೊಳ್ಳಿ....ಅದರಲ್ಲಿ ತಾಮ್ರದ ಪಟ್ಟಿಯನ್ನು ಹಾಕಿ. ಅದರಲ್ಲಿ ಅoಠಿಠಿeಡಿ suಟಠಿhಚಿಣe ಹಾಕಿ. ಅನಂತರ ಮಧ್ಯದಲ್ಲಿ Weಣ sಚಿತಿ ಜusಣನ್ನು ಹಾಕಿ. ಮೇಲಿನ ಭಾಗದಲ್ಲಿ ಒeಡಿಛಿuಡಿಥಿ ಹಾಗೂ Ziಟಿಞನ್ನು ಉಪಯೋಗಿಸಿ. ಆಮೇಲೆ ತಂತಿಗಳನ್ನು ಸೇರಿಸಿ. ಆಗ ಮಿತ್ರಾವರುಣಶಕ್ತಿಯ (ವಿದ್ಯುತ್) ಉತ್ಪಾದನೆಯಾಗುತ್ತದೆ. ಇಷ್ಟೇ ಅಲ್ಲ, ಅಗಸ್ತö್ಯ ಸಂಹಿತೆಯಲ್ಲಿ ಇಟeಛಿಣಡಿoಠಿಟಚಿಣiಟಿg ನ ವಿವರಣೆ ಕೂಡ ಸಿಗುತ್ತದೆ.
ಪಂಚರಾತ್ರಾಗಮದ ಸಂಹಿತೆಗಳಲ್ಲಿ ಒಂದು ಅಗಸ್ತö್ಯ ಸಂಹಿತೆ, ಇದು ಅಗಸ್ತö್ಯರು ವಿರಚಿಸಿದ ರಾಮ, ಸೀತೆ, ಲಕ್ಷö್ಮಣ ಮತ್ತು ಹನುಮಾನ್ರ ಆರಾಧನೆಯ ಕುರಿತಾಗಿದೆ. [೧] ಇದನ್ನು ಅಗಸ್ತö್ಯ-ಸುತೀಕ್ಷ÷್ಣ-ಸಂವಾದ ಎಂದೂ ಕರೆಯಲಾಗುತ್ತದೆ, ಏಕೆಂದರೆ ಇದು ಸುತೀಕ್ಷ÷್ಣನ ಮತ್ತು ಅಗಸ್ತö್ಯ ಋಷಿಗಳ ನಡುವಿನ ಸಂಭಾಷಣೆಯ ರೂಪದಲ್ಲಿದೆ. [೨] ಅಗಸ್ತö್ಯರಿಂದ ಬರೆಯಲ್ಪಟ್ಟಿದೆ ಎಂದು ನಂಬಲಾದ ಕೆಲವು ಪುರಾಣಗಳ ವಿಭಾಗಗಳನ್ನು ಅಗಸ್ತö್ಯ ಸಂಹಿತೆ ಎಂದೂ ಕರೆಯುತ್ತಾರೆ.
-ವಿದ್ವಾನ್ ಪ್ರದೀಪ ಹೆಗಡೆ