ಪಾಲಿಬೆಟ್ಟ, ಜ. ೨೮: ಕಾರ್ಮಿಕನ ಮನೆಯ ಸುತ್ತ ಮಾಲೀಕ ಕಂದಕ ನಿರ್ಮಿಸಿ ಅಮಾನವೀಯತೆ ಮೆರೆಯುತ್ತಿರುವ ಪ್ರಕರಣಕ್ಕೆ ಸಂಬAಧಿಸಿದAತೆ ೨೧ ದಿನಗಳು ಕಳೆದರೂ ಕಾರ್ಮಿಕನಿಗೆ ಸೂಕ್ತ ನ್ಯಾಯ ದೊರೆತಿಲ್ಲ.
ಘಟನೆಗೆ ಸಂಬAಧಿಸಿದAತೆ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಬಂದು ವಿವರ ಪಡೆದುಕೊಳ್ಳಲು ಮುಂದಾಗಿಲ್ಲ ಎಂದು ನೊಂದ ಕಾರ್ಮಿಕ ಸುಬ್ರಮಣಿ ಅವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ನ್ಯಾಂiÀi ಸಿಗದೇ ಇದ್ದಲ್ಲಿ ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಳ್ಳುವ ಚಿಂತನೆ ಹರಿಸಲಾಗಿದೆ ಎಂದು ದುಃಖದ ನುಡಿಗಳನ್ನು ವ್ಯಕ್ತಪಡಿಸಿದ್ದಾರೆ.
ಘಟನೆಯಿಂದ ಇದುವರೆಗೂ ಸರಾಗವಾಗಿ ಮನೆಗೆ ಹೋಗಲು ಸಾಧ್ಯವಾಗದೆ ಏಣಿ ಮೂಲಕ ಮನೆಗೆ ಹೋಗುವ ವ್ಯವಸ್ಥೆ ಇದೆ. ಇಂದಿಗೂ ಅನಾರೋಗ್ಯದಿಂದ ಬಳಲುತ್ತಿರುವ ಸುಬ್ರಮಣಿ ಅವರ ಪತ್ನಿ ಅಮೂದ ಮನೆಯಿಂದ ಹೊರ ಬರಲಾಗದೆ ನರಳುತ್ತಿದ್ದಾರೆ. ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆಗೂ ಸಮಸ್ಯೆ ಎದುರಾಗಿದೆ. ನೀರಿನ ಟ್ಯಾಂಕ್ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ. ಉಳಿದಂತೆ ಯಾವುದೇ ಸೌಲಭ್ಯಗಳು, ಸಮಸ್ಯೆಗಳು ಪರಿಹಾರಗಳು ದೊರೆತ್ತಿಲ್ಲ.
ಮಗಳು ಏಣಿಯ ಸಹಾಯದಿಂದ ಹೊರಗೆ ಕೆಲಸಕ್ಕೆ ತೆರಳುತ್ತಿದ್ದಾಳೆ. ಮಾಲೀಕ ಹಾಗೂ ಅವರಿಗೆ ಸಹಕರಿಸಿದ ವ್ಯಕ್ತಿಗಳ ಮೇಲೆ ಸಿದ್ದಾಪುರ ಠಾಣೆಯಲ್ಲಿ ದೂರು ಸಲ್ಲಿಸಲಾಗಿದೆ. ಆದರೂ ಕ್ರಮ ಕೈಗೊಳ್ಳುವಲ್ಲಿ ನಿಧಾನಗತಿಯನ್ನು ಅನುಸರಿಸಲಾಗುತ್ತಿದೆ. ದೂರು ನೀಡಿದ್ದರೂ ಸಹ ಮಾಲೀಕ ಹಾಗೂ ಮಾಲೀಕನ ಬೆಂಬಲಕ್ಕೆ ನಿಂತ ವ್ಯವಸ್ಥಾಪಕ ಹಾಗೂ ಇತರರು ಮತ್ತೆ ಸುಬ್ರಮಣಿ ಕುಟುಂಬವನ್ನು ಮಾನಸಿಕವಾಗಿ ಹಿಂಸಿಸುವ ಪ್ರವೃತ್ತಿಯನ್ನು ಮುಂದುವರೆಸಿದ್ದಾರೆ. ಠಾಣೆಯಲ್ಲಿ ಇವರುಗಳ ಮೇಲೆ ಎಫ್.ಐ.ಆರ್ ದಾಖಲಾಗಿದ್ದರೂ ಈ ರೀತಿಯ ವರ್ತನೆಗೆ ಮುಂದಾಗಿರುವುದರ ಹಿಂದೆ ಷಡ್ಯಂತ್ರ ನಡೆದಿದೆ ಎಂಬ ಗುಮಾನಿ ವ್ಯಕ್ತವಾಗುತ್ತಿದೆ ಎಂದು ಸುಬ್ರಮಣಿ ‘ಶಕ್ತಿ’ಗೆ ತಿಳಿಸಿದ್ದಾರೆ. ತಕ್ಷಣವೇ ಸಂಬAಧಿಸಿದವರ ಮೇಲೆ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಮುಂದಾಗಬೇಕೆAದು ಮನವಿ ಮಾಡಿಕೊಂಡಿದ್ದಾರೆ.
ಘಟನೆಯಿಂದ ನೊಂದು ಕುಟುಂಬಕ್ಕೆ ನ್ಯಾಯ ಒದಗಿಸಿಕೊಡುವಂತೆ ರಾಜ್ಯ ಉಚ್ಚನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ, ಕಾನೂನು ಸಚಿವರಿಗೆ, ಕ್ಷೇತ್ರದ ಶಾಸಕರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ನ್ಯಾಯ ಸಿಗುವ ಭರವಸೆಯಲ್ಲಿ ದಿನ ದೂಡುತ್ತಿದ್ದಾರೆ. ಮುಂದಿನ ದಿನದಲ್ಲಾದರೂ ಇವರ ಸಮಸ್ಯೆ ಬಗೆಹರಿಸಲು ಸಂಬAಧಿಸಿದ ಅಧಿಕಾರಿಗಳು ಕ್ರಮ ಜರುಗಿಸಲು ಮುಂದಾಗಲಿ ಎಂದು ಸ್ಥಳೀಯರು ಕೂಡ ಒತ್ತಾಯಿಸಿದ್ದಾರೆ.
-ಪುತ್ತಂ ಪ್ರದೀಪ್