ಮಡಿಕೇರಿ, ಜ. ೯: ಸಂಪ್ರದಾಯದAತೆ ಕೊಡವರ ಮದುವೆಯಲ್ಲಿ ಗಂಗಾಪೂಜೆ (ನೀರೆಡ್'ಪ) ಪದ್ಧತಿಯ ಪ್ರಕಾರ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ಪದ್ಧತಿಗೆ ವ್ಯತಿರಿಕ್ತವಾಗಿ ಕೆಲವರು ಹಿರಿಯರ ಆಶೀರ್ವಾದ ಪಡೆದ ನಂತರ ಕೇಕ್ ಕತ್ತರಿಸುವುದು, ಶಾಂಪೇನ್ ಚಿಮುಕಿ ಸುವುದು, ಪಟಾಕಿ ಸಿಡಿಸುವುದು ಇತ್ಯಾದಿ ಅಸಂಬದ್ಧ ಆಚರಣೆಗಳನ್ನು ನಡೆಸುತ್ತಿದ್ದು, ಈ ರೀತಿಯ ಆಚರಣೆಗಳಿಗೆ ಟಿ.ಶೆಟ್ಟಿಗೇರಿಯಲ್ಲಿರುವ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜ ನಿಷೇಧ ಹೇರಿದೆ.

ಸಮಾಜದ ಅಧ್ಯಕ್ಷ ಚೊಟ್ಟೆಯಂಡಮಾಡ ಬೋಸು ವಿಶ್ವನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಇದರೊಂದಿಗೆ ಕೊಡವ ಜನಾಂಗ ದವರ ಮದುವೆಯಲ್ಲಿ ಮುಹೂರ್ತದ ಸಂದರ್ಭ ವಧು - ವರರಿಗೆ ವೇದಿಕೆಯಲ್ಲಿ ಉಡುಗೊರೆ ಅಥವಾ ಹಣ ನೀಡಿ ಆಶೀರ್ವದಿಸುವ ಸಂದರ್ಭ ಸ್ತಿçÃಯರು ತಲೆ ಕೂದಲನ್ನು ಕಟ್ಟದೆ ಹಾಗೇ ಬಿಟ್ಟುಕೊಂಡು ಬಂದು ಆಶೀರ್ವದಿಸುವುದನ್ನೂ ಹಾಗೂ ಕೊಡವ ಜನಾಂಗದ ಮದುವೆ ಗಂಡು (ವರ) ಮುಹೂರ್ತಕ್ಕೆ ಕೂರುವಾಗ ಪದ್ದತಿ ಪ್ರಕಾರ ಕ್ಷೌರ ಮಾಡದೆ ಗಡ್ಡ ಬಿಟ್ಟುಕೊಂಡು ಮುಹೂರ್ತಕ್ಕೆ ಕೂರುವುದನ್ನೂ ನಿಷೇಧಿಸಿ ಮಹಾಸಭೆ ಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಕೊಡವರ ಪದ್ದತಿ - ಸಂಸ್ಕೃತಿ, ಹಬ್ಬ ಮತ್ತಿತರ ಆಚರಣೆಗಳಲ್ಲಿ ಅಖಿಲ ಕೊಡವ ಸಮಾಜದ ನಿರ್ಣಯಕ್ಕೆ ಬದ್ಧರಾಗಿರುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಚೊಟ್ಟೆಯಂಡಮಾಡ ಬೋಸು ವಿಶ್ವನಾಥ್ ಅವರು ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜವು ಕೇವಲ ಮದುವೆ ಮತ್ತಿತರ ಕಾರ್ಯಕ್ರಮಗಳಿಗೆ ಸಭಾಂಗಣ ನೀಡಲು ಸೀಮಿತವಾಗಿರದೆ ಕೊಡವ ಜನಾಂಗದ ಶ್ರೇಯೋಭಿವೃದ್ದಿಗಾಗಿ ಹಲವು ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಕೊಡವ ಆಟ್ ಪಾಟ್ ಶಿಬಿರ, ಯೋಗ ಶಿಬಿರ ಇತ್ಯಾದಿಗಳನ್ನು ನಡೆಸುತ್ತಿರು ವುದರ ಜೊತೆಗೆ ಕೊಡವರ ಹಬ್ಬಗಳನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದೆ. ಕಾವೇರಿ ಚಂಗ್ರಾAದಿಯ ದಿವಸ ಕೊಡವ ಸಮಾಜ ಕಾವೇರಿ ತೀರ್ಥ ವಿತರಿಸುವುದರೊಂದಿಗೆ ಜನೋತ್ಸವದ ರೀತಿಯಲ್ಲಿ ಹತ್ತು ದಿನಗಳವರೆಗೆ ನಡೆಸುತ್ತಿರುವ ಸಾಂಸ್ಕೃತಿಕ ಹಾಗೂ ಕ್ರೀಡಾ ಕಾರ್ಯಕ್ರಮಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತಗೊಂಡಿದೆ ಎಂದರು.

ಕೊಡವರ ಆಯುಧಪೂಜೆ ಕೈಲ್'ಪೊಳ್ದ್'ನಂದು ಕೊಡವ ಸಮಾಜದಲ್ಲಿ ಸಂಪ್ರದಾಯದAತೆ ಆಯುಧ ಹತ್ಯಾರು ವಾಹನಗಳಿಗೆ ಪೂಜೆ ಸಲ್ಲಿಸಿ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಪುತ್ತರಿ ನಮ್ಮೆಯ ಸಂದರ್ಭ ತಾವಳಗೇರಿ ಮೂಂದ್ ನಾಡ್ ಕೋಲ್ ಮಂದ್'ನ ಕಾರ್ಯಕ್ರಮದಲ್ಲಿ ಯಶಸ್ವಿಯಾಗಿ ಪಾಲ್ಗೊಳ್ಳಲಾಗುತ್ತಿದೆ.

ಕೊಡವ ಸಮಾಜದಲ್ಲಿ ಮದುವೆ ಮತ್ತಿತರ ಕಾರ್ಯಕ್ರಮಗಳಿಗೆ ಬೇಕಾದ ಎಲ್ಲಾ ಸುಸಜ್ಜಿತ ವ್ಯವಸ್ಥೆ ಇದ್ದು ಸ್ಥಳೀಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಹಾಗೂ ಅಭಿವೃದ್ಧಿಗೆ ಸದಸ್ಯರೆಲ್ಲರೂ ಸಹಕರಿಸಬೇಕೆಂದು ಕೋರಿದರು.

ಈ ಸಂದರ್ಭ ಮಾಜಿ ಸೈನಿಕ ಹಾಗೂ ನಾಡ್ ತಕ್ಕರಾಗಿದ್ದ ದಿವಂಗತ ಕೈಬಿಲೀರ ಬೋಪಯ್ಯ ಅವರ ಜ್ಞಾಪಕಾರ್ಥ ಅವರ ಪತ್ನಿ ಪಾರ್ವತಿ ಬೋಪಯ್ಯ ಸ್ಥಾಪಿಸಿರುವ ದತ್ತಿನಿಧಿಯಲ್ಲಿ ಹತ್ತನೆ ತರಗತಿಯ ಪರೀಕ್ಷೆಯಲ್ಲಿ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಪಡೆದು ತೇರ್ಗಡೆಯಾಗಿರುವ ಸಮಾಜದ ಸದಸ್ಯರ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ವೇದಿಕೆಯಲ್ಲಿ ಉಪಾಧ್ಯಕ್ಷ ಮಾಣೀರ ವಿಜಯ ನಂಜಪ್ಪ, ಕಾರ್ಯದರ್ಶಿ ಮನ್ನೇರ ರಮೇಶ್, ಖಜಾಂಚಿ ಚೊಟ್ಟೆಯಾಂಡಮಾಡ ವಿಶುರಂಜಿ, ಕ್ರೀಡೆ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕಟ್ಟೇರ ಈಶ್ವರ, ಸಂಚಾಲಕ ಚೆಟ್ಟಂಗಡ ರವಿ ಸುಬ್ಬಯ್ಯ, ನಿರ್ದೇಶಕರಾದ ತಡಿಯಂಗಡ ಕರುಂಬಯ್ಯ, ಆಂಡಮಡ ಸತೀಶ್, ಮನ್ನೇರ ಕಾವೇರಮ್ಮ, ಚಂಗುಲAಡ ಅಶ್ವಿನಿ ಸತೀಶ್, ನಾಡ್ ತಕ್ಕ ಕೈಬಿಲೀರ ಹರೀಶ್ ಅಪ್ಪಯ್ಯ ಉಪಸ್ಥಿತರಿದ್ದರು.