ಮಡಿಕೇರಿ, ಜ. ೨: ಪಶುಪಾಲನಾ ಇಲಾಖಾ ವತಿಯಿಂದ ಜಿಲ್ಲೆಯಲ್ಲಿ ಜನವರಿ, ೧೮ ರವರೆಗೆ ೨ ನೇ ಸುತ್ತಿನ ಕಾಲುಬಾಯಿ ಜ್ವರ ರೋಗ ನಿರೋಧಕ ಲಸಿಕೆ ಹಾಕುವ ಕಾರ್ಯಕ್ರಮ ನಡೆಯಲಿದೆ. ಆದ್ದರಿಂದ ಜಿಲ್ಲೆಯ ರೈತರು ತಮ್ಮ ರಾಸುಗಳಿಗೆ ತಪ್ಪದೇ ಲಸಿಕೆ ಹಾಕಿಸಿಕೊಳ್ಳುವಂತೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರಾದ ಡಾ.ಸುರೇಶ್ ಭಟ್ ಅವರು ಮನವಿ ಮಾಡಿದ್ದಾರೆ.
ಲಸಿಕಾ ಕಾರ್ಯಕ್ರಮದ ವಿವರ ಇಂತಿದೆ: ತಾ. ೩ ರಂದು (ಇಂದು) ಮಡಿಕೇರಿ ತಾ. ಪಾಲೂರು, ಕಾರುಗುಂದ, ಪೇರೂರು, ಎಮ್ಮೆಮಾಡು,ಎಂ ಬಾಡಗ, ವೀರಾಜಪೇಟೆ ತಾ. ಚೆಂಬೆಬೆಳ್ಳೂರು, ಮೈತಾಡಿ, ಕೊಳತ್ತೊಡು ಬೈಗೋಡು, ಮೇಕೂರು, ಹೂಸಕೇರಿ, ಹರಿಹರ, ಬಾಡಗರಕೇರಿ, ಕುಂದ, ನೋಕ್ಯ, ಅರಕೇರಿ ಅರಣ್ಯ-೧. ಸೋಮವಾರಪೇಟೆ ತಾ. ಹೆಬ್ಬಾಲೆ, ಅತ್ತೂರು ನಲ್ಲೂರು, ಮೆಣಸ, ತೋಳೂರು ಶೆಟ್ಟಳ್ಳಿ.
ತಾ. ೪ ರಂದು ಮಡಿಕೇರಿ ತಾ. ಕಾರುಗುಂದ, ಬೇಂಗೂರು, ಎಮ್ಮೆಮಾಡು, ಎಂ. ಬಾಡಗ, ಕಿಗ್ಗಾಲು. ವೀರಾಜಪೇಟೆ ತಾ. ದೇವಣಗೇರಿ, ಮೈತಾಡಿ, ಹಾತೂರು, ಚೆನ್ನಯ್ಯನಕೋಟೆ, ಬಾಡಗರಕೇರಿ, ತೆರಾಲು, ಕುಂದ, ಕಿರುಗೂರು, ಕೈಕೇರಿ. ಸೋಮವಾರಪೇಟೆ ತಾ. ಹೆಬ್ಬಾಲೆ, ಹೆರೂರು, ಅಂಕನಳ್ಳಿ, ಕೂತಿ.
ತಾ. ೫ ರಂದು ಮಡಿಕೇರಿ ತಾ. ಬೇಂಗೂರು, ಕೊಳಗದಾಳು, ನೆಲಜಿ, ಕಿಗ್ಗಾಲು. ವೀರಾಜಪೇಟೆ ತಾ. ಐಮಂಗಲ, ಮೈತಾಡಿ, ನಲ್ವತ್ತೋಕ್ಲು, ಹಾತೂರು, ಚೆನ್ನಯ್ಯನಕೋಟೆ, ತೆರಾಲು, ಕಿರುಗೂರು, ಗೋಣಿಕೊಪ್ಪ. ಸೋಮವಾರಪೇಟೆ ತಾ. ಹೆಬ್ಬಾಲೆ, ಹೆರೂರು, ಮೈಲಾತ್ಪುರ, ತಲ್ತೆರೆಶೆಟ್ಟಳ್ಳಿ.
ತಾ. ೬ ರಂದು ಮಡಿಕೇರಿ ತಾ. ಕೊಳಗದಾಳು, ನೆಲಜಿ, ಕುಂಜಿಲ, ಮರಗೋಡು. ವೀರಾಜಪೇಟೆ ತಾ. ಮಗ್ಗುಲ, ಬಿಳುಗುಂದ, ಚೆನ್ನಯ್ಯನಕೋಟೆ, ತೆರಾಲು, ಪರಗಟಗೇರಿ, ಕಿರುಗೂರು, ಅರುವತ್ತೋಕ್ಲು. ಸೋಮವಾರಪೇಟೆ ತಾ. ತೊರೆನೂರು, ಹೆರೂರು, ಹಾರೋಹಳ್ಳಿ, ಶಾಂತಳ್ಳಿ.
ತಾ.೭ ರಂದು ಮಡಿಕೇರಿ ತಾ. ಕೊಳಗದಾಳು, ಬಿ. ಬಾಡಗ, ಕುಂಜಿಲ, ಮರಗೋಡು, ಅರೆಕಾಡು. ವೀರಾಜಪೇಟೆ ತಾ. ಕುಟ್ಟಂದಿ, ವಿ.ಬಾಡಗ, ಹೊಸೂರು, ಪರಗಟಗೇರಿ, ಕಿರುಗೂರು. ಸೋಮವಾರಪೇಟೆ ತಾ. ತೊರೆನೂರು, ಚೇರಳ, ಶ್ರೀಮಂಗಲ, ಮಾಲಂಬಿ, ಅಭಿಮಠ.
ತಾ.೮ ರಂದು ಮಡಿಕೇರಿ ತಾ. ಬಿ.ಬಾಡಗ, ಕೋಪಟ್ಟಿ, ನಾಲಡಿ, ಯುವಕಪಾಡಿ (ಮರಂದೋಡ), ಹೊಸ್ಕೇರಿ. ಸೋಮವಾರಪೇಟೆ ತಾ. ತೊರೆನೂರು, ಚೇರಳ, ಶ್ರೀಮಂಗಲ, ಆಲೂರು, ಬೆಟ್ಟದಳ್ಳಿ.
ತಾ.೯ ರಂದು ಮಡಿಕೇರಿ ತಾ. ಕೋಪಟ್ಟಿ, ಸಿಂಗತ್ತೂರು, ಯುವಕಪಾಡಿ (ಮರಂದೋಡ), ಹೊಸ್ಕೇರಿ, ಸೊಡ್ಲೂರು, ಕಟ್ಟೆಮಾಡು. ಸೋಮವಾರಪೇಟೆ ತಾಲೂಕಿನ ತೊರೆನೂರು, ಚೇರಳ, ಶ್ರೀಮಂಗಲ, ದೊಡ್ಡಕಣಗಾಲು, ಬೆಟ್ಟದಳ್ಳಿ.
ತಾ.೧೦ ರಂದು ಮಡಿಕೇರಿ ತಾ. ಸಿಂಗತ್ತೂರು, ನರಿಯಂದಡ, ಸೊಡ್ಲೂರು, ಕಟ್ಟೆಮಾಡು, ಬಲಮುರಿ. ವೀರಾಜಪೇಟೆ ತಾ. ವಿ.ಬಾಡಗ, ಕಾರ್ಮಾಡು, ಚಿಕ್ಕಮಂಡೂರು. ಸೋಮವಾರಪೇಟೆ ತಾ. ತೊರೆನೂರು, ಈರಳವಳಮುಡಿ, ಕೂಡ್ಲೂರುಚೆಟ್ಟಳ್ಳಿ, ಕುಂದಳ್ಳಿ.
ತಾ.೧೧ ರಂದು ಮಡಿಕೇರಿ ತಾ. ಸಿಂಗತ್ತೂರು, ಸಂಪಾಜೆ, ಕೋಕೇರಿ, ಬಲಮುರಿ. ವೀರಾಜಪೇಟೆ ತಾ. ೧ ನೇ ರುದ್ರಗುಪ್ಪೆ, ಅಮ್ಮತ್ತಿ, ಹೊಸಕೋಟೆ, ಚಿಕ್ಕಮಂಡೂರು, ಬಲ್ಯಮಂಡೂರು. ಸೋಮವಾರಪೇಟೆ ತಾ.ತೊರೆನೂರು, ನೆಲ್ಲಿಹುದಿಕೇರಿ, ಕೊತ್ತನಳ್ಳಿ, ನೆಲ್ಲಿದುದಿಕೇರಿ, ತೊರೆನೂರು.
ತಾ.೧೨ ರಂದು ಮಡಿಕೇರಿ ತಾ. ಸಂಪಾಜೆ, ಚೆಂಬು, ಊರುಬೈಲು, ಕುದುರೆಪಾಯಿ, ಮೇಲ್ಚೆಂಬು, ಕೊಳಕೇರಿ, ಕಿರುಂದಾಡು. ವೀರಾಜಪೇಟೆ ತಾ. ೧ ನೇ ರುದ್ರಗುಪ್ಪೆ, ಬಿ ಶೆಟ್ಟಿಗೇರಿ, ಕಾವಾಡಿ, ಬಲ್ಯಮಂಡೂರು, ಬೇಗೂರು. ಸೋಮವಾರಪೇಟೆ ತಾ. ಮಣಜೂರು, ನೆಲ್ಲಿಹುದಿಕೇರಿ, ಹರಗ.
ತಾ.೧೩ ರಂದು ಮಡಿಕೇರಿ ತಾ. ಚೆಂಬು, ಬೇತು, ಕಿರುಂದಾಡು, ಕೊಣಂಜಗೇರಿ, ವೀರಾಜಪೇಟೆ ತಾ. ಬಿ.ಶೆಟ್ಟಿಗೇರಿ, ಕಣ್ಣಂಗಾಲ, ಬೆಗೂರು, ಮುಗುಟಗೇರಿ. ಸೋಮವಾರಪೇಟೆ ತಾಲೂಕಿನ ಶಿರಂಗಾಲ, ಅಭ್ಯತ್ಮಂಗಲ, ಹರಗ.
ತಾ.೧೪ ರಂದು ಮಡಿಕೇರಿ ತಾ. ಚೆಂಬು, ನಾಪೋಕ್ಲು, ಕೊಣಂಜಗೇರಿ. ಸೋಮವಾರಪೇಟೆ ತಾ. ಶಿರಂಗಾಲ ವಾಲ್ನೂರು ತ್ಯಾಗತ್ತೂರು, ಕುಮಾರಳ್ಳಿ.
ತಾ.೧೫ ರಂದು ಮಡಿಕೇರಿ ತಾ. ಚೆಂಬು, ಕೆ.ಪೆರಾಜೆ, ನಾಪೋಕ್ಲು, ಹೊದವಾಡ, ಚೇಲಾವರ, ಕರಡ. ವೀರಾಜಪೇಟೆ ತಾ. ಹಚ್ಚಿನಾಡು, ಯಡೂರು, ಹಾಲುಗುಂದ. ಸೋಮವಾರಪೇಟೆ ತಾ. ಶಿರಂಗಾಲ, ವಾಲ್ನೂರು ತ್ಯಾಗತ್ತೂರು, ಕುಮಾರಳ್ಳಿ.
ತಾ.೧೬ ರಂದು ಮಡಿಕೇರಿ ತಾ. ಕೆ. ಪೆರಾಜೆ, ಕರಿಕೆ, ಅರಪಟ್ಟು. ತಾ.೧೭ ರಂದು ಮಡಿಕೇರಿ ತಾ. ಕರಿಕೆ. ವೀರಾಜಪೇಟೆ ತಾ. ಹಾಲುಗುಂದ ತಾ. ೧೮ ರಂದು ವೀರಾಜಪೇಟೆ ಕಳತ್ಮಾಡು ಮತ್ತು ಬೈರಂಬಾಡ ಇಲ್ಲಿ ಲಸಿಕೆ ಹಾಕುವ ಕಾರ್ಯಕ್ರಮ ನಡೆಯಲಿದೆ.