ಕೂಡಿಗೆ, ಡಿ. ೨: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನತ್ತೂರು ಗ್ರಾಮದಲ್ಲಿ ಸಣ್ಣ ಗುಡಿಸಲಿನಲ್ಲಿ ವಾಸವಿದ್ದ ನಾಗಮ್ಮ ದಂಪತಿಯ ಮನೆ ಭಾರಿ ಗಾಳಿ ಮಳೆಯಿಂದಾಗಿ ನೆಲಕ್ಕೆ ಉರುಳಿ ಬಿದ್ದು ವಾಸವಿರಲು ಮನೆ ಇಲ್ಲದಾಗಿತ್ತು.

ಇದನ್ನು ಮನಗಂಡ ಕುಶಾಲನಗರ ರೋಟರಿ ಕ್ಲಬ್‌ನ ಅಧ್ಯಕ್ಷ ಎಂ.ಡಿ. ರಂಗಸ್ವಾಮಿ ಹಾಗೂ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ಥಳೀಯರ ಸಹಕಾರದೊಂದಿಗೆ ಮನೆಯನ್ನು ನಿರ್ಮಿಸಲು ಯೋಜನೆ ತಯಾರಿಸಿ ಈಗಾಗಲೇ ಶೇ. ೭೫ ರಷ್ಟು ಕೆಲಸವನ್ನು ಮುಗಿಸಲಾಗಿದೆ. ಮುಂದಿನ ದಿನಗಳಲ್ಲಿ ಉಳಿದ ಕೆಲಸವನ್ನು ಪೂರ್ಣಗೊಳಿಸಿದ ಬಳಿಕ ನಾಗಮ್ಮನವರಿಗೆ ಮನೆಯನ್ನು ಹಸ್ತಾಂತರ ಮಾಡಲಾಗುವುದು ಎಂದು ರಂಗಸ್ವಾಮಿ ಮನೆ ಕಾಮಗಾರಿಯನ್ನು ವೀಕ್ಷಣೆ ಮಾಡಿ ತಿಳಿಸಿದರು.