ವೀರಾಜಪೇಟೆ, ಡಿ. ೨: ಅಂತರ್ ರಾಜ್ಯ ಮಟ್ಟದ ಕರಾಟೆ ಕ್ರೀಡೆಯಲ್ಲಿ ಕೊಡಗಿನಿಂದ ಪ್ರತಿನಿಧಿಸಿದ ವಿದ್ಯಾರ್ಥಿಗಳು ಚಿನ್ನ, ಬೆಳ್ಳಿ, ಮತ್ತು ಕಂಚು ಪದಕಗಳನ್ನು ಪಡೆದಿದ್ದಾರೆ.

ತಮಿಳುನಾಡಿನ ಕೊಯಮತ್ತೂರುವಿನ ಶರಣವಣಪಟ್ಟಿಯಲ್ಲಿ ನಡೆದ ೧೪ ನೇ ಅಂತರ್ ರಾಜ್ಯ ಓಪನ್ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಕೊಡಗಿನ ಗೋಜೊ ರೀಯೊ ಕರಾಟೆ ಶಾಲೆಯ ತರಬೇತುದಾರರಾದ ಸನ್‌ಸಾಯಿ ಎಂ.ಬಿ. ಚಂದ್ರನ್ ಅವರಿಂದ ತರಬೇತಿ ಪಡೆದ ವಿದ್ಯಾರ್ಥಿಗಳು ಕತ್ತಾ ಮತ್ತು ಕುಮಿತೆ ವಿಭಾಗದಲ್ಲಿ ೯ ಚಿನ್ನ ೭ ಬೆಳ್ಳಿ ಮತ್ತು ೮ ಕಂಚಿನ ಪದಕಗಳನ್ನು ಪಡೆದಿದ್ದಾರೆ.