ಮಡಿಕೇರಿ, ಡಿ. ೨: ಒಂಟಿ ಸಲಗವೊಂದು ಕಾರಿನ ಮೇಲೆ ದಾಳಿ ಮಾಡಿದ ಘಟನೆ ನಡೆದಿದೆ. ಮಡಿಕೇರಿಯ ಸೈಫ್ ಎಂಬವರು ಇತ್ತೀಚೆಗೆ ತಮ್ಮ ಕಾರಿನಲ್ಲಿ ನಿಸರ್ಗಧಾಮಕ್ಕೆ ತೆರಳಿ ರಾತ್ರಿ ಹಿಂತಿರುಗುತ್ತಿದ್ದ ವೇಳೆ ಆನೆಕಾಡು ಬಳಿ ಒಂಟಿ ಸಲಗವೊಂದು ಕಾರಿನ ಮೇಲೆ ದಾಳಿ ಮಾಡಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದ ಸೈಫ್, ಅವರ ಪತ್ನಿ ಹಾಗೂ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.