ಮಡಿಕೇರಿ, ಡಿ. ೨: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಎನ್.ಸಿ.ಸಿ ಕೆಡೆಟ್ ಆಗಿದ್ದು, ಇದೀಗ ಎನ್‌ಸಿಸಿ ವಿಶೇಷ ಪ್ರವೇಶದಡಿಯಲ್ಲಿ ಸೇನೆಯ ಕಮಿಷನ್ಡ್ ಆಫೀಸರ್ ತರಬೇತಿಗೆ ಆಯ್ಕೆಯಾಗುವುದರೊಂದಿಗೆ ಜಿಲ್ಲೆಗೆ ಕೀರ್ತಿ ತಂದಿರುವ ಐಶ್ವರ್ಯ ದೇಚಮ್ಮ ಅವರನ್ನು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಅಭಿನಂದಿಸಲಾಯಿತು. ಪ್ರಾಂಶುಪಾಲ ಡಾ. ಸಿ. ಜಗತ್ ತಿಮ್ಮಯ್ಯ, ಎನ್.ಸಿ.ಸಿ ಅಧಿಕಾರಿ ಹಾಗೂ ಇತಿಹಾಸ ವಿಭಾಗದ ಮುಖ್ಯಸ್ಥ ಮೇ. ಡಾ. ರಾಘವ. ಬಿ, ಸ್ನಾತಕೋತ್ತರ ಅರ್ಥಶಾಸ್ತç ವಿಭಾಗದ ಮುಖ್ಯಸ್ಥರಾದ ಡಾ. ತಿಪ್ಪೇಸ್ವಾಮಿ ಹಾಗೂ ದೇಚಮ್ಮ ಅವರ ತಾಯಿ ಮೋಂತಿ ಗಣೇಶ್ ಭಾಗವಹಿಸಿದ್ದರು. ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಭಾಗವಹಿಸಿ ಎನ್‌ಸಿಸಿ ತಂಡವನ್ನು ದೇಚಮ್ಮ ಮುನ್ನಡೆಸಿದ್ದರು.