ಸಿದ್ದಾಪುರ, ಡಿ. ೨: ಪೊಲೀಸ್ ಇಲಾಖೆಯ ೧೧೨ ಕಂಟ್ರೋಲ್ ರೂಮ್ ವತಿಯಿಂದ ಸಿದ್ದಾಪುರದ ಇಕ್ರಾ ಪಬ್ಲಿಕ್ ಶಾಲೆ ಹಾಗೂ ನೆಲ್ಲಿಹುದಿಕೇರಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ೧೧೨ ವಾಹನದ ಬಗ್ಗೆ ಅರಿವು ಮೂಡಿಸಲಾಯಿತು. ಈ ಕುರಿತು ಮಾತನಾಡಿದ ಸಿದ್ದಾಪುರ ಪೊಲೀಸ್ ಠಾಣಾಧಿಕಾರಿ ಮೋಹನ್‌ರಾಜ್ ೧೧೨ ಸಂಖ್ಯೆಗೆ ಕರೆ ಮಾಡಿ ದೂರು ನೀಡಿದಲ್ಲಿ ದೂರು ಸ್ವೀಕರಿಸಿ ಸಮಸ್ಯೆಗಳಿಗೆ ಸ್ಪಂದಿಸಲಾಗುವುದೆAದರು. ಈ ಸಂದರ್ಭ ೧೧೨ ಕಂಟ್ರೋಲ್ ರೂಂನ ಠಾಣಾಧಿಕಾರಿಗಳಾದ ಧನಂಜಯ ಹಾಗೂ ಹರಿಚಂದ್ರ, ಮುಖ್ಯಪೇದೆ ಲಕ್ಷಿö್ಮÃಕಾಂತ್ ಮತ್ತು ಸಿಬ್ಬಂದಿ ಹಾಜರಿದ್ದರು.