ಮಡಿಕೇರಿ, ಡಿ. ೩: ದೇಶರಕ್ಷಣೆಯ ಕಾಯಕ ನಿರ್ವಹಿಸಿ ನಿವೃತ್ತರಾಗಿರುವ ಮಾಜಿ ಸೈನಿಕರನ್ನು ಬಿಪಿಎಲ್ ಪಟ್ಟಿಗೆ ಸೇರಿಸುವಲ್ಲಿ ಕ್ರಮಕೈಗೊಳ್ಳುವುದು ಸೇರಿದಂತೆ ಪ್ರಧಾನಮಂತ್ರಿಗಳ ಕೃಷಿ ಸಮ್ಮಾನ್ ಯೋಜನೆಯ ವ್ಯಾಪ್ತಿಗೆ, ನಿವೃತ್ತ ಸೈನಿಕರನ್ನೂ ಪರಿಗಣಿಸುವಂತೆ ಸರಕಾರದೊಂದಿಗೆ ವ್ಯವಹರಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲು ಮಾಜಿ ಸೈನಿಕರ ಸಂಘ ತೀರ್ಮಾನಿಸಿದೆ.
ಮಡಿಕೇರಿಯ ರೋಟರಿ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ನಿವೃತ್ತ ಮೇಜರ್ ಜನರಲ್ ಬಿ.ಎ. ಕಾರ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ನಿನ್ನೆ ನಡೆದ ವಾರ್ಷಿಕ ಮಹಾಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಿತು. ವಿಷಯ ಪ್ರಸ್ತಾಪಿಸಿದ ಅಧ್ಯಕ್ಷ ಬಿ.ಎ. ಕಾರ್ಯಪ್ಪ ಅವರು ಮಾಜಿ ಸೈನಿಕರು ರೂ. ೨೦ ಸಾವಿರ ಹಾಗೂ ಅಧಿಕ ಪಿಂಚಣಿ ಪಡೆಯುತ್ತಿದ್ದಾರೆ ಎಂಬ ಕಾರಣಕ್ಕಾಗಿ ಅವರನ್ನು ಈ ಯೋಜನೆಗಳಿಂದ ಹೊರತುಪಡಿಸಲಾಗಿದೆ ಇದು ಸರಿಯಲ್ಲ ಸೈನಿಕರ ಸೇವಾ ದಿನಗಳ ಪರಿಶ್ರಮವನ್ನು ಪರಿಗಣಿಸಬೇಕು ಎಂದು ಅವರು ಹೇಳಿದರು.
ಮಡಿಕೇರಿಯಲ್ಲಿರುವ ಜನರಲ್ ತಿಮ್ಮಯ್ಯ ಮ್ಯೂಸಿಯಂಗೆ ಮಾಜಿ ಸೈನಿಕರು ಅವರ ಅವಲಂಬಿತರುಗಳಿಗೆ ಉಚಿತ ಪ್ರವೇಶ ಅವಕಾಶ ಕಲ್ಪಿಸುವ ಕುರಿತು ಜಿಲ್ಲಾಧಿಕಾರಿಗಳ ಜತೆ ಚರ್ಚಿಸಿ ಮನವಿ ಮಾಡುವುದಾಗಿ ಅವರು ಈ ಸಂದರ್ಭ ಹೇಳಿದರು. ಮಡಿಕೇರಿ ಹಾಗೂ ವೀರಾಜಪೇಟೆ ಯಲ್ಲಿರುವ ಆರ್ಮಿ ಕ್ಯಾಂಟೀನ್, ಇಸಿಎಚ್ಎಸ್ನ ಸೌಲಭ್ಯವನ್ನು ಮಾಜಿ ಯೋಧರು ಶಿಸ್ತು ಬದ್ಧವಾಗಿ ಪಡೆದು ಕೊಳ್ಳುವಂತೆಯೂ ಅವರು ಸಲಹೆಯಿತ್ತರು. ನಿಯಮಾನುಸಾರ ವಾಗಿ ಭೂ ಮಂಜೂರಾತಿ ವಿಚಾರದಲ್ಲೂ ಸಂಬAಧಿಸಿದವರು ಸಹಕಾರ ನೀಡಬೇಕು. ನಿವೃತ್ತರೂ ಈ ಪ್ರಯೋಜನ ಪಡೆದುಕೊಳ್ಳುವಂತೆ ಅವರು ಹೇಳಿದರು.
ಜಿಲ್ಲೆಯಲ್ಲಿ ಮಾಜಿ ಸೈನಿಕರ ಹಲವು ಸಂಘಗಳು ರಚನೆಯಾಗಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಜಾತಿವಾರು ಸಂಘ, ಅಧಿಕಾರಿಗಳನ್ನು ಹೊರತುಪಡಿಸಿದ ಸಂಘ ರಚನೆ ಮಾಡುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದ ಅವರು ಸೈನಿಕರು ಒಂದೇ ಜಾತಿ ಇದರಲ್ಲಿ ಭಿನ್ನ - ಬೇದ ಮಾಡುವ ಬೆಳವಣಿಗೆ ಸಮಂಜಸವಲ್ಲ ಎಲ್ಲರೂ ಒಟ್ಟಿಗೇ ಇರಬೇಕು. ಇದು ಸೈನ್ಯದ ಸದುದ್ದೇಶವೂ ಆಗಿದೆ ಎಂದು ಅಭಿಪ್ರಾಯಪಟ್ಟರು.
ಚಿಂಗಪ್ಪಗೆ ಸನ್ಮಾನ
ಗೃಹ ರಕ್ಷಕದಳದಲ್ಲಿ ಕಮಾಂಡೆAಟ್ ಆಗಿ ಜಿಲ್ಲೆಯಲ್ಲಿ ಉತ್ತಮ ಕೆಲಸ ನಿರ್ವಹಿಸಿ ಕರ್ನಾಟಕ ಸರಕಾರದಿಂದ ಚಿನ್ನದ ಪದಕ ಗಳಿಸಿರುವ ಸಂಘದ ಕಾರ್ಯದರ್ಶಿ ನಿವೃತ್ತ ಮೇಜರ್
(ಮೊದಲ ಪುಟದಿಂದ) ಓಡಿಯಂಡ ಎಸ್. ಚಿಂಗಪ್ಪ ಅವರನ್ನು ಸಭೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಸಭೆಯಲ್ಲಿ ಪದಾಧಿಕಾರಿಗಳಾದ ಕರ್ನಲ್ ನೆರ್ಪಂಡ ಚಿಣ್ಣಪ್ಪ, ಏರ್ ಕಮಡೋರ್ ದೇವಯ್ಯ, ಲೆ.ಕ. ಅಯ್ಯುಡ ಗಣಪತಿ, ಗ್ರೂಪ್ಕ್ಯಾಪ್ಟನ್ ಕಾರ್ಯಪ್ಪ ಸೇರಿದಂತೆ ಜಿಲ್ಲೆಯ ಇತರ ಸಂಘಗಳ ಅಧ್ಯಕ್ಷರು, ಸದಸ್ಯರು ಪಾಲ್ಗೊಂಡಿದ್ದರು.