ಮಡಿಕೇರಿ, ನ. ೧೧: ಸಿದ್ದಾಪುರ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆಯೂ, ಸಿದ್ದಾಪುರ ಅಯ್ಯಪ್ಪ ದೇವಾಲಯದಲ್ಲಿ ವರ್ಷಂಪ್ರತಿ ವಿವಿಧ ಹಿಂದೂ ಸಂಘಟನೆಗಳ ವತಿಯಿಂದ ನಡೆಸುವ ಕುಟ್ಟಪ್ಪ ಬಲಿದಾನ್ ದಿವಸ್‌ನ ಶಾಂತಿಪೂಜೆ ವಿವಿಧ ಹಿಂದೂ ಸಂಘಟನೆ ಕಾರ್ಯಕರ್ತರು, ಪಕ್ಷದ ಕಾರ್ಯಕರ್ತರ ಸಮ್ಮುಖದಲ್ಲಿ ನಡೆಯಿತು.

ಕಾರ್ಯಕರ್ತರು ಭಾರತಮಾತೆಗೆ ಜೈಕಾರ ಹಾಕಿದ ಸಂದರ್ಭದಲ್ಲಿ ಪೊಲೀಸರು ಮಡಿಕೇರಿಯಿಂದ ಸರ್ಕಲ್ ಇನ್ಸ್ಪೆಕ್ಟರ್ ಮತ್ತು ಪೊಲೀಸ್ ತುಕಡಿ ಆಗಮಿಸುತ್ತಿದ್ದು, ಬಂಧಿಸುತ್ತೇವೆ ಎಂದು ಹೇಳಿದಾಗ ವೀರಾಜಪೇಟೆ ತಾಲೂಕು ಭಜರಂಗದಳದ ಮಾಜಿ ಸಹಸಂಚಾಲಕ ಹಾಗೂ ಬಿಜೆಪಿ ಸಿದ್ದಾಪುರ ಶಕ್ತಿ ಕೇಂದ್ರದ ಹಾಲಿ ಅಧ್ಯಕ್ಷ ಪ್ರವೀಣ್ ಸಿದ್ದಾಪುರ ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಶಾಂತಿಯುತವಾಗಿ ಪೂಜೆ ಸಲ್ಲಿಸಿ ಕಾರ್ಯಕರ್ತರು ದೇವಾಲಯದಿಂದ ನಿರ್ಗಮಿಸಿದರು.