ಪುಟ್ಟಪ್ಪ ವೃತ್ತದಲ್ಲಿ ಅಳವಡಿಸಿರುವ ಹೈಮಾಸ್ಟ್ ದೀಪವನ್ನು ದುರಸ್ತಿ ಪಡಿಸುವ ಸಂದರ್ಭ ಎಲೆಕ್ಟಿçಕ್ ಕೆಲಸಗಾರ ಮಾಡಿದ ಎಡವಟ್ಟಿನಿಂದಾಗಿ ಯುವಕನ ಪ್ರಾಣ ಪಕ್ಷಿ ಹಾರಿದೆ ಎಂಬ ಅಂಶ ಇದೀಗ ಚರ್ಚಿತ ವಿಷಯವಾಗಿದೆ. ದೀಪವನ್ನು ದುರಸ್ತಿಪಡಿಸಿದ ನಂತರ ಕೆಲಸಗಾರನು ಹೈಮಾಸ್ಟ್ ಕಂಬದ ತಳಭಾಗದಲ್ಲಿ ತಂತಿಯನ್ನು ಸುತ್ತಿದ್ದ. ರಾತ್ರಿ ಮಳೆಯೂ ಬೀಳುತ್ತಿತ್ತು. ಆ ತಂತಿಯು ಕಂಬಕ್ಕೆ ತಾಗಿಕೊಂಡಿದ್ದರಿAದ ಸಣ್ಣದಾಗಿ ವಿದ್ಯುತ್ ಪ್ರವಹಿಸುತ್ತಿತ್ತು. ಇದೇ ತಂತಿಯ ಮೇಲೆ ಮಂಜುನಾಥ್ ಕೆಳಮುಖವಾಗಿ ಬಿದ್ದಿದ್ದರಿಂದ ಆತನ ತಲೆ ಕಂಬಕ್ಕೆ ತಾಗಿದ್ದರೆ, ಕೈಗಳು ತಂತಿಯನ್ನು ಸ್ಪರ್ಶಿಸಿತ್ತು. ಹೀಗಾಗಿ ವಿದ್ಯುತ್ ಪ್ರವಹಿಸಿ ಮಂಜುನಾಥ್ ಸಾವಿಗೀಡಾಗಿದ್ದಾನೆ. ಒಂದು ವೇಳೆ ದುರಸ್ತಿ ಕಾರ್ಯ ಮುಗಿದೊಡನೆ ತಂತಿಯನ್ನು ತೆಗೆದಿದ್ದರೆ ಅನಾಹುತ ಸಂಭವಿಸುತ್ತಿರಲಿಲ್ಲ ಎಂದು ಸಾರ್ವಜನಿಕರು ಅಭಿಪ್ರಾಯಿಸಿದ್ದಾರೆ.