ಕುಶಾಲನಗರ, ಅ. ೩೧: ಕುಶಾಲನಗರ ಸಮೀಪದ ಕೈಗಾರಿಕಾ ಬಡಾವಣೆಯಲ್ಲಿರುವ ಕರ್ನಾಟಕ ರಾಜ್ಯ ಪಾನೀಯ ನಿಗಮದ ಘಟಕದ ಗೋದಾಮಿನಲ್ಲಿ ಮಾರಾಟವಾಗದೆ ಅವಧಿ ಮೀರಿ ಉಳಿದ, ಮಾನವ ಸೇವನೆಗೆ ಯೋಗ್ಯವಲ್ಲದ ಮದ್ಯ ದಾಸ್ತಾನನ್ನು ನಾಶಪಡಿಸಲಾಯಿತು.
ಅಬಕಾರಿ ಇಲಾಖೆಯ ಸೋಮವಾರಪೇಟೆ ತಾಲೂಕು ಉಪ ಅಧೀಕ್ಷಕಿ ಆರ್.ಎಂ. ಚೈತ್ರಾ ನೇತೃತ್ವದಲ್ಲಿ ರೂ. ೧೬ ಲಕ್ಷ ಮೌಲ್ಯದ ಅವಧಿ ಮೀರಿದ ೯೭೦ ಬಾಕ್ಸ್ ವಿವಿಧ ಕಂಪನಿಯ ಬಿಯರ್ ಹಾಗೂ ಹಳೆಯ ಮದ್ಯವನ್ನು ಅಧಿಕಾರಿಗಳ ಸಮ್ಮುಖದಲ್ಲಿ ಸುರಿದು ನಾಶಪಡಿಸಲಾಯಿತು.
ಕೆ.ಎಸ್.ಬಿ.ಸಿ.ಎಲ್. ಘಟಕದ ವ್ಯವಸ್ಥಾಪಕ ಎಸ್. ರಾಜು, ಘಟಕದ ಮೇಲುಸ್ತುವಾರಿ ಅಬಕಾರಿ ಸಬ್ ಇನ್ಸ್ಪೆಕ್ಟರ್ ಬಿ.ಎಸ್. ಲೋಕೇಶ್, ಅಬಕಾರಿ ಸಿಬ್ಬಂದಿಗಳಾದ ಮಹಾಂತೇಶ್, ಕರಿಯಪ್ಪ, ಕುಶಾಲನಗರ ಗ್ರಾಮಾಂತರ ಪೊಲೀಸ್ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು ಹಾಗೂ ಡಿಪೋದ ಸಿಬ್ಬಂದಿಗಳು ಇದ್ದರು.