ಕೊಡಗಿನ ವ್ಯಕ್ತಿ ದುರ್ಮರಣ

ಮಡಿಕೇರಿ, ಅ. ೧೯: ಜಿಲ್ಲೆಯ ಸೂರ್ಲಬ್ಬಿ ಸಮೀಪದ ಕುಂಬಾರಗಡಿಗೆ ನಿವಾಸಿ ಕನ್ನಿಕಂಡ ಸುಬ್ಬಯ್ಯ (ಬೊಳ್ಳು-೮೫) ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹಿರಿಸಾವೆ ಸಮೀಪ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ತಮ್ಮ ಮಗನ ಮನೆಗೆ ತೆರಳಿದ್ದ ಸುಬ್ಬಯ್ಯ ಅವರು ತಾ.೧೮ ರಂದು ಜಿಲ್ಲೆಗೆ ತಮ್ಮ ಮಗ, ಸೊಸೆಯೊಂದಿಗೆ ಬಸ್ಸಿನಲ್ಲಿ ಹಿಂತಿರುಗುತ್ತಿದ್ದಾಗ ದುರ್ಘಟನೆ ನಡೆದಿದೆ.

ಜಿಲ್ಲೆಗೆ ವಾಪಸ್ಸಾಗುತ್ತಿದ್ದಾಗ ತಾವು ಪ್ರಯಾಣಿಸುತ್ತಿದ್ದ ಬಸ್, ಪ್ರಯಾಣಿಕರು ಮೂತ್ರವಿಸರ್ಜನೆಗೆಂದು ಕೆಲ ನಿಮಿಷ ರಾಷ್ಟಿçÃಯ ಹೆದ್ದಾರಿಯಲ್ಲಿ ನಿಂತಿದೆ. ಈ ಸಂದರ್ಭ ಸುಬ್ಬಯ್ಯ ಅವರು ಕೂಡ ಬಸ್ ನಿಂದ ಇಳಿದು ರಸ್ತೆ ದಾಟುವಾಗ ಅಪರಿಚಿತ ವಾಹನವೊಂದು ಅವರ

(ಮೊದಲ ಪುಟದಿಂದ) ಮೇಲೆ ಹರಿದು ನಿಲ್ಲಿಸದೆ ಅದೇ ವೇಗದಲ್ಲಿ ಹೋಗಿದೆ. ಪರಿಣಾಮ ಸುಬ್ಬಯ್ಯ ಅವರ ದೇಹದ ಕೆಳಭಾಗ ಮೇಲ್ಭಾಗದಿಂದ ಸಂಪೂರ್ಣ ಬೇರ್ಪಟ್ಟು ಛಿದ್ರವಾಗಿದೆ. ಘಟನೆ ಸಂಬAಧ ಹಿರಿಸಾವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಮೀಪದಲ್ಲೇ ಇದ್ದ ಟೋಲ್ ಬೂತ್‌ನಲ್ಲಿ ಸಿ.ಸಿ. ಕ್ಯಾಮರಾಗಳ ಮೂಲಕ ಅಪರಿಚಿತ ವಾಹನದ ಪತ್ತೆಗೆ ಪೊಲೀಸರು ಕ್ರಮಕೈಗೊಂಡಿದ್ದಾರೆ. ಮೃತರು ೨ ಗಂಡು, ೪ ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.