ನಾಪೋಕ್ಲು, ಅ. ೧೯: ತಮಿಳುನಾಡು ರಾಜ್ಯದ ಎಸ್‌ಸಿ, ಎಸ್‌ಟಿ ಆಯೋಗದ ನಿರ್ದೇಶಕಿಯಾಗಿ ಕೊಡಗಿನ ಎ.ಎಂ. ಲೀಲಾವತಿ ಧನರಾಜ್ ಆಯ್ಕೆಯಾಗಿದ್ದಾರೆ. ಮೂಲತಃ ಕಕ್ಕಬ್ಬೆಯ ಯವಕಪಾಡಿ ಗ್ರಾಮದ ಕುಡಿಯರ ಮುತ್ತಪ್ಪ ಹಾಗೂ ಕಾವೇರಮ್ಮ ದಂಪತಿ ಪುತ್ರಿಯಾಗಿರುವ ಲೀಲಾವತಿ ಅವರನ್ನು ತಮಿಳುನಾಡು ಸರ್ಕಾರ ಗುರುತಿಸಿ ಆಯೋಗದ

(ಮೊದಲ ಪುಟದಿಂದ) ನಿರ್ದೇಶಕಿಯನ್ನಾಗಿ ಆಯ್ಕೆ ಮಾಡಿದೆ. ಆಯೋಗದ ಕಚೇರಿ ಕೊಯಮತ್ತೂರಿನ ಪೊಳ್ಳಾಚಿಯಲ್ಲಿದ್ದು ಅಲ್ಲಿ ಸ್ಥಾನವನ್ನು ಅಲಂಕರಿಸಿದ್ದಾರೆ. ಕಕ್ಕಬ್ಬೆ, ಮಡಿಕೇರಿಯ ಸಂತ ಜೋಸೆಫರ ಶಾಲೆ ಹಾಗೂ ಬಾಳುಗೋಡುವಿನ ಏಕಲವ್ಯ ವಸತಿ ಶಾಲೆಯಲ್ಲಿ ಶಿಕ್ಷಣ ಪಡೆದ ಬಳಿಕ ಇವರು ಮಂಗಳೂರಿನಲ್ಲಿ ಬಿಎಸ್‌ಡಬ್ಲುö್ಯ ಪದವಿ ಗಳಿಸಿ ತಮಿಳುನಾಡಿನ ಅಣ್ಣಾಮಲೈ ವಿಶ್ವವಿದ್ಯಾನಿಲಯದಿಂದ ಎಂಎಸ್‌ಡಬ್ಲುö್ಯ ಪದವಿ ಪಡೆದಿದ್ದಾರೆ. ಲೀಲಾವತಿ ಕನ್ಯಾಕುಮಾರಿಯ ರಾಧಪುರ ನಿವಾಸಿ ಧನರಾಜ್ ಅವರ ಪತ್ನಿಯಾಗಿದ್ದಾರೆ.