ಕುಶಾಲನಗರ, ಅ ೧೩: ಕುಶಾಲನಗರ ಗಣಪತಿ ದೇವಾಲಯಕ್ಕೆ ಸ್ಥಳೀಯ ದಾನಿಗಳು ಬಾಲ ಗಣಪತಿಯ ಬೆಳ್ಳಿ ಕವಚವನ್ನು ದೇವಾಲಯದ ಆಡಳಿತ ಮಂಡಳಿ ಮೂಲಕ ಹಸ್ತಾಂತರಿಸಿದರು.

ಕುಶಾಲನಗರದ ಉದ್ಯಮಿಗಳಾದ ಎಂ.ವಿ. ಕುಮಾರ್ ಮತ್ತು ಸಿ.ವಿ. ನಾಗೇಶ್ ಕುಟುಂಬಸ್ಥರು ಬೆಳ್ಳಿಯ ಕವಚವನ್ನು ನೀಡಿದ್ದಾರೆ.

ಗಣಪತಿ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ವಿ. ಎನ್. ವಸಂತಕುಮಾರ್, ಪ್ರಧಾನ ಅರ್ಚಕ ನಾಗೇಂದ್ರ ಬಾಬು, ಆಡಳಿತ ಮಂಡಳಿಯ ವಿ.ಡಿ. ಪುಂಡರಿಕಾಕ್ಷ, ಅಪ್ಪಣ್ಣ, ರಮೇಶ್, ಡಿ.ಸಿ. ಜಗದೀಶ್ ಸ್ವೀಕರಿಸಿದರು.