ಮಡಿಕೇರಿ,ಅ.೧೧: ತಾಳತ್ತಮನೆಯ ಶ್ರೀ ದುರ್ಗಾಭಗವತಿ ದೇವಾಲಯದಲ್ಲಿ ಶರನ್ನವರಾತ್ರಿಯ ಅಂಗವಾಗಿ ತಾ.೧೩ರ ದುರ್ಗಾಷ್ಟಮಿಯಂದು ಗಣಪತಿ ಹೋಮ ಹಾಗೂ ದುರ್ಗಾಹನನ ವಿಶೇಷ ಪೂಜೆ ಏರ್ಪಡಿಸಲಾಗಿದೆ ಎಂದು ದೇವಾಲಯ ಸಮಿತಿ ತಿಳಿಸಿದೆ.
ಅಂದು ಬೆಳಿಗ್ಗೆ ೯ ಗಂಟೆಗೆ ಗಣಪತಿ ಹೋಮ, ೧೦ ಗಂಟೆಗೆ ದುರ್ಗಾಹನನ ವಿಶೇಷ ಪೂಜೆ ಜರುಗಲಿದ್ದು, ಈ ಸಂದರ್ಭ ಭಕ್ತಾಧಿಗಳು ಮಾಡಿಸಿರುವ ಮಾಂಗಲ್ಯ ಸರವನ್ನು ಮಾತೆ ಶ್ರೀ ದುರ್ಗಾಭಗವತಿ ದೇವಿಗೆ ಅರ್ಪಿಸಲಾಗುವುದು. ಭಕ್ತಾಧಿಗಳು ಕೋವಿಡ್ ಮಾರ್ಗಸೂಚಿಯನ್ನು ಪಾಲಿಸಿಕೊಂಡು ಶ್ರೀ ದೇವಿಯ ತೀರ್ಥ ಪ್ರಸಾದವನ್ನು ಸ್ವೀಕರಿಸಲು ದೇವಾಲಯ ಸಮಿತಿ ಕೋರಿದೆ.