ಮಡಿಕೇರಿ, ಸೆ. ೧೫: ನಿಟ್ಟೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಕೋವಿಡ್ ಲಸಿಕೆ ಶೇ. ನೂರರಷ್ಟು ಗುರಿ ಸಾಧಿಸುವ ಸಂಬAಧ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಕ್ಕೇರ ಅಯ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ಟಾಸ್ಕ್ಫೋರ್ಸ್ ಸಭೆ ನಡೆಯಿತು.

ಪಂಚಾಯಿತಿ ಜನಸಂಖ್ಯೆಯಲ್ಲಿ ಗಿರಿಜನರೇ ಹೆಚ್ಚು ಇದ್ದು ಇವರಲ್ಲಿ ಶೇ. ೭೦ ರಷ್ಟು ಗಿರಿಜನರು ಕೋವಿಡ್ ಲಸಿಕೆ ಪಡೆದುಕೊಂಡಿದ್ದು, ಉಳಿದವರು ಕೂಡ ಲಸಿಕೆ ಹಾಕಿಸಿ ಕೊಳ್ಳುವಂತೆ ಗಿರಿಜನ ಜನವಸತಿ ಪ್ರದೇಶದಲ್ಲಿ ವ್ಯಾಪಕ ಪ್ರಚಾರ, ಪ್ರಸಾರ ಕಾರ್ಯ ನಡೆಸಿ ಅವರ ಮನವೊಲಿಸಿ ಲಸಿಕೆಯನ್ನು ಹಾಡಿಗಳ ಮನೆ ಮನೆಗೆ ತೆರಳಿ ನೀಡಲು ನಿರ್ಣಯಿಸ ಲಾಯಿತು. ಜೊತೆಗೆ ಕಾಫಿ ತೋಟ ಗಳಲ್ಲಿ ಕೆಲಸ ಮಾಡುವ ಕಾರ್ಮಿಕ ವರ್ಗದವರೆಲ್ಲಾ ಲಸಿಕೆಗಳನ್ನು ತೆಗೆದುಕೊಳ್ಳುವಂತೆ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಪಂಚಾಯಿತಿ ಸಿಬ್ಬಂದಿ, ಆಡಳಿತ ಮಂಡಳಿ ಕಾರ್ಯಪ್ರವೃತ್ತರಾಗ ಬೇಕೆಂದು ಸಭೆಯಲ್ಲಿ ತೀರ್ಮಾನಿಸ ಲಾಯಿತು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪಡಿಞರಂಡ ಕವಿತಾ ಪ್ರಭು, ನೋಡಲ್ ಅಧಿಕಾರಿ ಡಾ. ಎ.ಬಿ, ತಮ್ಮಯ್ಯ, ಸದಸ್ಯರಾದ ಕಾಟಿಮಾಡ ಶರೀನ್ ಮುತ್ತಣ್ಣ, ಅಮ್ಮುಣಿ, ಸಾಸು, ರಾಜು, ಬಾಳೆಲೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಅಶೋಕ್ ಕುಮಾರ್, ಪಿ.ಡಿ.ಒ. ಮನಮೋಹನ್, ಆರೋಗ್ಯ ನಿರ್ವಾಹಕ ತೇಜಸ್, ಗ್ರಾಮ ಲೆಕ್ಕಿಗರಾದ ಚಂದ್ರಪ್ರಸಾದ್, ಅರಣ್ಯ ಅಧಿಕಾರಿ ಯೋಗೇಶ್, ಕೋವಿಡ್ ಟಾಸ್ಕ್ಫೋರ್ಸ್ ಸದಸ್ಯರಾದ ಪ್ರಭುಕುಮಾರ್, ಪೂಣಚ್ಚ, ಆಶಾ ಕಾರ್ಯಕರ್ತೆಯರು ಹಾಜರಿದ್ದರು.