*ಸಿದ್ದಾಪುರ ಸೆ. ೮ : ಕೋವಿಡ್ ಸಂದಿಗ್ಧ ಪರಿಸ್ಥಿತಿಯಿಂದ ಸಂಕಷ್ಟಕ್ಕೆ ಸಿಲುಕಿದ್ದ ಚೆಟ್ಟಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರುಗಳಿಗೆ ಸಂಘ ನೆರವಿನ ಹಸ್ತ ಚಾಚಿದೆ.

ಅನೇಕ ಕುಟುಂಬಗಳು ಕಷ್ಟಕ್ಕೆ ಸಿಲುಕಿರುವುದನ್ನು ಅರಿತುಕೊಂಡ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿಉತ್ತಪ್ಪ ಸ್ವಂತ ಖರ್ಚಿನಿಂದ ಹಂತಹAತವಾಗಿ ಮನೆ ಬಾಗಿಲಿಗೆ ಪಡಿತರ ಕಿಟ್‌ಗಳನ್ನು ನೀಡಿದರು. ಜಾತಿ, ಮತ, ಭೇದವಿಲ್ಲದೆ ಎಲ್ಲರಿಗೂ ನೆರವು ನೀಡಿದ ಅವರು ಸುಮಾರು ೨೫ ಅಲ್ಪಸಂಖ್ಯಾತ ಕುಟುಂಬಗಳಿಗೆ ಕಿಟ್ ವಿತರಿಸಿದರು.

ಕೃಷಿ ಪತ್ತಿನ ಸಹಕಾರ ಸಂಘದ ಬೆಳವಣಿಗೆಗೆ ಎಲ್ಲಾ ಸದಸ್ಯರುಗಳು ಅಗತ್ಯ ಸಹಕಾರವನ್ನು ನೀಡಿದ್ದಾರೆ. ಸದಸ್ಯರು ಕಷ್ಟದಲ್ಲಿದ್ದಾಗ ಸಹಾಯ ಮಾಡುವುದು ಸಂಘದ ಜವಾಬ್ದಾರಿಯಾಗಿದೆ. ಹಾಗಾಗಿ ಕಿಟ್‌ಗಳನ್ನು ವಿತರಿಸಿರುವುದಾಗಿ ಮಣಿಉತ್ತಪ್ಪ ಹೇಳಿದರು.

ಸಂಘದ ನಿರ್ದೇಶಕ ಕಣಜಾಲು ಪೂವಯ್ಯ ಹಾಗೂ ಸಿಬ್ಬಂದಿ ಕಣಜಾಲು ಕಿಶೋರ್ ಈ ಸಂದರ್ಭ ಹಾಜರಿದ್ದರು.