ತಪ್ಪಿಸಿಕೊಳ್ಳುವ ಭರದಲ್ಲಿ ನಾಲೆಗೆ ಬಿದ್ದ ಯುವಕ

ಕೂಡಿಗೆ, ಸೆ. ೮: ರಾತ್ರಿ ವೇಳೆ ಬೈಕ್‌ನಲ್ಲಿ ತೆರಳುತ್ತಿದ್ದ ಯುವಕನ ಮೇಲೆ ಚಿರತೆ ಎರಗಿದೆ. ಚಿರತೆ ದಾಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಯುವಕನ ಬೈಕ್ ನಿಯಂತ್ರಣ ಕಳೆದುಕೊಂಡು ಆಯ ತಪ್ಪಿ ಪಕ್ಕದ ನಾಲೆಗೆ ಉರುಳಿದ ಘಟನೆ ಭುವನಗಿರಿ ಗ್ರಾಮದಲ್ಲಿ ನಡೆದಿದೆ.

ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭುವನಗಿರಿ ಗ್ರಾಮದ ಹತ್ತಿರದ ಹಾರಂಗಿ ಎಡದಂಡೆಯ ಸಮೀಪದ ಕಲ್ಲುಗೆರೆ ಗ್ರಾಮದ ನಿವಾಸಿ ಪ್ರಸನ್ನ ಎಂಬಾತ ಎಂದಿನAತೆ ತನ್ನ ಡೈವರ್ ಅಗಿ ಕೆಲಸ ಮುಗಿಸಿ ಬೈಕ್‌ನಲ್ಲಿ ರಾತ್ರಿ ವೇಳೆ ಮನೆಯತ್ತ ತೆರಳುತ್ತಿದ್ದ ಸಂದರ್ಭದಲ್ಲಿ, ಹಾರಂಗಿ ಎಡದಂಡೆ ಮೇಲೆ ಕಲ್ಲುಗೆರೆ ನರ್ಸರಿ ಕಡೆಯಿಂದ ಬಂದ ಚಿರತೆ ಈತನ ಮೇಲೆ ಹಾರಿದೆ. ಇದನ್ನು ಕಂಡು ತಕ್ಷಣ ಬ್ರೇಕ್ ಹಾಕಿದ ಸಂದರ್ಭ ಬೈಕ್ ನಿಯಂತ್ರಣ ಕಳೆದುಕೊಂಡು ನೆಲಕ್ಕುರುಳಿದೆ. ಘಟನೆಯಿಂದ ಆಯತಪ್ಪಿದ ಸವಾರ ಪ್ರಸನ್ನ ತುಂಬಿ ಹರಿಯುತ್ತಿದ್ದ ಎಡದಂಡೆಯ ನಾಲೆಗೆ ಬಿದ್ದಿದ್ದಾನೆ. ನಾಲೆಯ ಬದಿಯ ಕಾಡು ಗಿಡಗಂಟಿಗಳನ್ನು ಹಿಡಿದು ಸ್ವಲ್ಪ ದೂರದವರೆಗೆ ನಾಲೆಯಲ್ಲಿ ಈಜಿ ಮೇಲಕ್ಕೆ ಹತ್ತಿ ಬಂದು ಜೀವ ಉಳಿಸಿಕೊಂಡಿದ್ದಾನೆ. ಚಿರತೆಯ ತಿರುಗಾಟದಿಂದಾಗಿ ಸೀಗೆಹೊಸೂರು, ಭುವನಗಿರಿ ಗ್ರಾಮಸ್ಥರಲ್ಲಿ ಆತಂಕ ಉಂಟುಮಾಡಿದೆ.

-ಕೆ.ಕೆ.ಎನ್. ಶೆಟ್ಟಿ.