ಮಡಿಕೇರಿ, ಸೆ. ೮: ಶ್ರೀಮಂಗಲ ಪೊಲೀಸ್ ಠಾಣಾ ಸರಹದ್ದಿನ ವೆಸ್ಟ್ ನೆಮ್ಮಲೆ ಗ್ರಾಮದ ಕುಂಙಗಡ ರಘು ಅವರ ತೋಟದಲ್ಲಿ ಮರವೊಂದಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿಯೇ ಮೃತದೇಹ ಪತ್ತೆಯಾಗಿದೆ. ಮೃತ ಪುರುಷನ ದೇಹ ಹಾಗೂ ಮುಖದ ಭಾಗ ಸಂಪೂರ್ಣ ಕೊಳೆತುಹೋಗಿದ್ದು, ಗುರುತಿಸಲು ಅಸಾಧ್ಯವಾದ ಸ್ಥಿತಿ ತಲುಪಿದೆ. ಕೆಲವು ದಿನಗಳ ಹಿಂದೆಯೇ ವ್ಯಕ್ತಿ ನೇಣಿಗೆ ಶರಣಾಗಿರಬಹುದೆಂದು ಊಹಿಸಲಾಗಿದೆ.

ತಾ.೭ ರ ಬೆಳಿಗ್ಗೆ ಸುಮಾರು ೮ ಗಂಟೆಗೆ ತೋಟದ ಮಾಲೀಕ ರಘು ಅವರ ಪತ್ನಿ ಯಶೋಧ ಅವರು ತೋಟಕ್ಕೆ ತೆರಳಿದಾಗ ಈ ಘಟನೆ ಬೆಳಕಿಗೆ ಬಂದಿದೆ. ವಿಷಯ ತಿಳಿದ ಬಳಿಕ ರಘು ಅವರು ಶ್ರೀಮಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಮೃತ ವ್ಯಕ್ತಿಯು ಕೆಂಪು ಹಾಗೂ ನೀಲಿ ಗೆರೆಗಳಿರುವ ಶರ್ಟ್ ಹಾಗೂ ಕಾವಿ ಬಣ್ಣದ ಪಂಚೆ, ಬೂದು ಬಣ್ಣದ ಪ್ಲಾಸ್ಟಿಕ್ ಬೆಲ್ಟ್ ಚಪ್ಪಲಿಗಳನ್ನು ಧರಿಸಿದ್ದರು. ಮೃತ ವ್ಯಕ್ತಿಗೆ ವಾರಿಸುದಾರರಿದ್ದಲ್ಲಿ ಶ್ರೀಮಂಗಲ ಪಿ.ಎಸ್.ಐ - ೯೪೮೦೮೦೪೯೬೦ ಅಥವಾ ದೂ. ೦೮೨೭೪-೨೪೬೨೪೬ ಅನ್ನು ಸಂಪರ್ಕಿಸಲು ಕೋರಿದೆ.