ಮಡಿಕೇರಿ, ಸೆ. ೮: ಮಡಿಕೇರಿ ತಾಲೂಕಿನಲ್ಲಿ ವಾಸವಿರುವ ಪಡಿತರ ಚೀಟಿ ಹೊಂದಿರುವ ಪರಿಶಿಷ್ಟ ಪಂಗಡದವರು ಜೀವ ಮಾಪಕ ಮರು ದೃಢೀಕರಣ (ಇಕೆವೈಸಿ.) ಮಾಡಿಸಲು ನ್ಯಾಯಬೆಲೆ ಅಂಗಡಿಗಳಿಗೆ ತೆರಳುತ್ತಿಲ್ಲವಾದ ಕಾರಣ ಮುಂದಿನ ದಿನಗಳಲ್ಲಿ ಪಡಿತರ ಆಹಾರ ವಿತರಣೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

ಆದ್ದರಿಂದ ಮಡಿಕೇರಿ ತಾಲೂಕಿನಲ್ಲಿ ವಾಸವಿರುವ ಪರಿಶಿಷ್ಟ ಪಂಗಡದ ಕುಟುಂಬದ ಮುಖ್ಯಸ್ಥರು ಮತ್ತು ಕುಟುಂಬದ ಸದಸ್ಯರು ಪಡಿತರ ಚೀಟಿಯೊಂದಿಗೆ ತಾವು ಪಡಿತರ ಆಹಾರ ಧಾನ್ಯ ಪಡೆಯುವ ನ್ಯಾಯಬೆಲೆ ಅಂಗಡಿಗೆ ತಾ. ೧೦ ರೊಳಗೆ ಭೇಟಿ ನೀಡಿ ತಮ್ಮ ಬೆರಳಚ್ಚು ನೀಡಿ ಜೀವ ಮಾಪಕ ಮರು ದೃಢೀಕರಣ (ಇಕೆವೈಸಿ.) ಮಾಡಿಸಿಕೊಳ್ಳುವಂತೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಕೋರಿದ್ದಾರೆ.