ಮಡಿಕೇರಿ, ಸೆ. ೭: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟಿçÃಯ ಪೌಷ್ಠಿಕಾಂಶ ಸಪ್ತಾಹ ನಗರದ ಸಾಮರ್ಥ್ಯ ಸೌಧ ಸಭಾಂಗಣದಲ್ಲಿ ನಡೆಯಿತು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ಎನ್. ಸುಬ್ರಮಣ್ಯ ಅವರು ಕಾರ್ಯಕ್ರಮ ಉದ್ಘಾಟಿಸಿ ಇಂದಿನ ದಿನಗಳಲ್ಲಿ ಅಪೌಷ್ಠಿಕತೆಗೆ ಮೂಲ ಕಾರಣ ಪ್ರಸ್ತುತ ಜೀವನ ಶೈಲಿ ಮತ್ತು ಆಹಾರ ಕ್ರಮಗಳಾಗಿವೆ. ಹಿಂದಿನ ಕಾಲದಲ್ಲಿ ಯಾವುದೇ ರಾಸಾಯನಿಕಗಳಿಲ್ಲದೆ ಆಹಾರ ಬೆಳೆಗಳನ್ನು ಬೆಳೆಯುತ್ತಿದ್ದರು. ಆದ್ದರಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳಾಗಲಿ, ಅಪೌಷ್ಠಿಕತೆಯಾಗಲೀ ನಮ್ಮ ತಲೆಮಾರಿನಲ್ಲಿ ಕಡಿಮೆ ಇತ್ತು, ಆದರೆ ಇಂದಿನ ಬದಲಾದ ಜೀವನ ಶೈಲಿ ಆಹಾರ ಕ್ರಮ ಹಾಗೂ ರಾಸಾಯನಿಕಗಳ ಬಳಕೆಯಿಂದ ಈ ತಲೆಮಾರಿನ ಎಲ್ಲರಿಗೂ ಅಪೌಷ್ಠಿಕತೆ ಕಾಡುತ್ತಿದೆ.
ತಾಯಂದಿರು ಮಗುವಿಗೆ ಜನ್ಮ ನೀಡಿದಾಗ ಸ್ತನಪಾನ ಮಾಡುವುದು ಅತೀ ಅಗತ್ಯವಾಗಿದ್ದು, ಇದರಿಂದ ಅನೇಕ ರೀತಿಯ ಅಪೌಷ್ಠಿಕತೆೆ ಯಿಂದ ಮಗುವು ಮುಕ್ತವಾಗುತ್ತದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಬ್ಬಂದಿಗಳು ಇದರ ಬಗ್ಗೆ ಅರಿವು ಮೂಡಿಸುವಂತಹ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಅರವಿಂದ ಬಾಬು ಮಾತನಾಡಿ, ರಾಷ್ಟಿçÃಯ ಪೌಷ್ಠಿಕಾಂಶ ಸಪ್ತಾಹವು ಒಂದು ಅರಿವು ಕಾರ್ಯಕ್ರಮವಾಗಿದ್ದು, ಇದರ ಅಂಗವಾಗಿ ಹಲವಾರು ಯೋಜನೆಗಳಡಿಯಲ್ಲಿ ಮಹಿಳೆ ಯರು ಮತ್ತು ಮಕ್ಕಳಲ್ಲಿನ ಅಪೌಷ್ಠಿ ಕತೆಯನ್ನು ಹೋಗಲಾಡಿಸುವ ಸಲುವಾಗಿ ಧನ ಸಹಾಯ ಮತ್ತು ಇತರ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದರು.
ಮಕ್ಕಳ ಅಭಿವೃದ್ಧಿ ಅಧಿಕಾರಿ ಅರುಂಧತಿ ಅವರು ಕೊಡಗಿನಲ್ಲಿ ಪ್ರಕೃತಿಯು ಸಮೃದ್ಧವಾಗಿದೆ. ಹಾಗಾಗಿ ಜಿಲ್ಲೆಯಲ್ಲಿ ದ್ವಿದಳ ಧಾನ್ಯಗಳು, ಸಿರಿಧಾನ್ಯಗಳು ಇತರೇ ಆಹಾರ ಕ್ರಮವನ್ನು ಜನರು ರೂಢಿಸಿಕೊಳ್ಳಬೇಕು ಎಂದರು.
ಉಳಿದಂತೆ ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿ ಕಾರಿಯಾದ ಸೀತಾಲಕ್ಷಿö್ಮ, ಮಡಿಕೇರಿ ನಗರಸಭೆ ಸದಸ್ಯೆ ಶಾರದ, ಮೇಲ್ವಿಚಾರಕಿ ಶೀಲಾ ಮತ್ತು ಸವಿತಾ ಅವರು ಹಾಜರಿದ್ದರು.