ಸುAಟಿಕೊಪ್ಪ, ಸೆ. ೬: ಸಂತೆ ನಡೆಸಲು ನಿರ್ಬಂಧ ಹೇರಿದ್ದರು ಕೂಡ ಸುಂಟಿಕೊಪ್ಪದಲ್ಲಿ ಸಂತೆ ನಡೆಯಿತು. ಇದು ಸಾರ್ವಜನಿಕರ ಆಕ್ಷೇಪಕ್ಕೆ ಕಾರಣವಾಯಿತು.

ಶನಿವಾರದಂದು ಧ್ವನಿವರ್ದಕದ ಮೂಲಕ ಸಂತೆ ರದ್ದತಿಯ ಬಗ್ಗೆ ಗ್ರಾ.ಪಂ ಮಾಹಿತಿ ನೀಡಿತ್ತು. ಆದರೆ, ಭಾನುವಾರ ಬೆಳಿಗ್ಗೆ ಹೊರಜಿಲ್ಲೆಯ ವ್ಯಾಪಾರಿಗಳು ನಗರಕ್ಕೆ ಆಗಮಿಸಿ ಮಾರುಕಟ್ಟೆ ಆವರಣದಲ್ಲಿ ಅಂಗಡಿ ಹಾಕಿ ವ್ಯಾಪಾರ ನಡೆಸಿದರು. ಸಂತೆಗೆ ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ಆಗಮಿಸಿದ್ದು ಆತಂಕಕ್ಕೆ ಕಾರಣವಾಯಿತು. ಗ್ರಾ.ಪಂ. ಯಾವುದೇ ಕ್ರಮಕೈಗೊಳ್ಳದ ಬಗ್ಗೆ ಆಕ್ಷೇಪವೂ ವ್ಯಕ್ತವಾಯಿತು.