ಗೋಣಿಕೊಪ್ಪ ವರದಿ, ಸೆ. ೫: ವೀರಾಜಪೇಟೆ ತಾಲೂಕು ಕೃಷಿ ಇಲಾಖೆ ಮೂಲಕ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ರೈತರ ಮಕ್ಕಳ ಶಿಷ್ಯವೇತನ ಯೋಜನೆಯಡಿ ವಿದ್ಯಾನಿಧಿ ಲೋಕಾರ್ಪಣೆಯನ್ನು ಆನ್‌ಲೈನ್ ಮೂಲಕ ರೈತರು, ವಿದ್ಯಾರ್ಥಿಗಳು ವೀಕ್ಷಿಸಿದರು.

ಆನ್‌ಲೈನ್ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದ ಕಾರ್ಯಕ್ರಮದಲ್ಲಿ ಯೋಜನೆಯ ಮಾಹಿತಿ ಪಡೆದುಕೊಂಡರು.

ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಮುಖ್ಯಸ್ಥ ಡಾ. ಚೆಪ್ಪುಡೀರ ಜಿ. ಕುಶಾಲಪ್ಪ, ಪ್ರಾಧ್ಯಾಪಕ ಡಾ. ಸತೀಶ್, ಡಾ. ಗಣೇಶ್ ಪ್ರಸಾದ್ ರೈತ ಸಂಪರ್ಕ ಕೇಂದ್ರ ಅಧಿಕಾರಿ ಎ. ಜೆ. ರೀನಾ, ಎ. ಪಿ. ಮೀರಾ, ಪಿ. ಲವಿನಾ ಮಾದಪ್ಪ ಭಾಗವಹಿಸಿದ್ದರು.