ಚೆಯ್ಯಂಡಾಣೆ, ಸೆ. ೫: ಎಡಪಾಲ ಹಾಗೂ ಪಾರಾಣೆ ಪಟ್ಟಣದಲ್ಲಿ ಮಳೆಯಿಂದ ಹರಿದು ಬಂದ ಮಣ್ಣುಗಳ ರಾಶಿಯಿಂದ ರಸ್ತೆಯಲ್ಲಿ ವಾಹನಗಳು ಸಂಚರಿಸಲು ತೊಡಕಾಗುತ್ತಿರುವುದನ್ನು ಮನಗಂಡು ಎಡಪಾಲ ಎಸ್‌ಕೆಎಸ್‌ಎಸ್‌ಎಫ್ ವಿಖಾಯ ತಂಡ ಮಣ್ಣುಗಳನ್ನು ತೆರವುಗೊಳಿಸಿ ಹಾಗೂ ರಸ್ತೆ ಬದಿಯ ಕಾಡನ್ನು ಕಡಿದು ಸ್ವಚ್ಛಗೊಳಿಸಿತು. ಈ ಸಂದರ್ಭ ಸಂಘಟನೆಯ ಚೆರ್ಮೆನ್ ಜುನೈದ್, ಕಾರ್ಯದರ್ಶಿ ಹನೀಫ, ಪದಾಧಿಕಾರಿಗಳಾದ ಯಾಸೀನ್, ಆಫ್ರಿದ್, ಅಸ್ಲಮ್, ಶಹೀರ್, ಸಫ್ವನ್, ಶಫೀಕ್ ಉಪಸ್ಥಿತರಿದ್ದರು.