ಕೂಡಿಗೆ, ಆ. ೨೬: ಹೃದಯ ಸಂಬAಧಿ ಅನಾರೋಗ್ಯಕ್ಕೆ ತುತ್ತಾಗಿ ಸಂಕಷ್ಟದಲ್ಲಿದ್ದ ದಂಪತಿಗೆ ವೀರಶೈವ ಲಿಂಗಾಯತ ಯುವ ವೇದಿಕೆ ವತಿಯಿಂದ ಆರ್ಥಿಕ ನೆರವು ನೀಡಲಾಯಿತು.

ಕೂಡುಮಂಗಳೂರು ಗ್ರಾಮದ ಪ್ರಕಾಶ್ ಬಡಾವಣೆ ನಿವಾಸಿ ನಾಗೇಶ್ ಎಂಬವರು ಹೃದಯ ಸಂಬAಧಿ ಅನಾರೋಗ್ಯಕ್ಕೆ ತುತ್ತಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗದೆ ಕಳೆದ ಒಂದೂವರೆ ವರ್ಷದಿಂದ ಸಂಕಷ್ಟಕ್ಕೆ ಸಿಲುಕಿದ್ದರು. ಮಕ್ಕಳಿಲ್ಲದ ಈ ದಂಪತಿ ಜೀವನ ನಿರ್ವಹಣೆಗೆ ಪರದಾಡುತ್ತಿರುವುದನ್ನು ಮನಗಂಡು ವೀರಶೈವ ಲಿಂಗಾಯತ ಯುವ ವೇದಿಕೆಯ ಸ್ಥಳೀಯ ಮುಖಂಡ ಕೆ.ಡಿ. ಪ್ರಶಾಂತ್ ಅವರು ರಾಜ್ಯ ಘಟಕದ ಅಧ್ಯಕ್ಷರ ಗಮನಕ್ಕೆ ತಂದಿದ್ದರು.

ಇದಕ್ಕೆ ಸ್ಪಂದಿಸಿದ ವೀರಶೈವ ಲಿಂಗಾಯತ ಯುವ ವೇದಿಕೆ ರಾಜ್ಯಾಧ್ಯಕ್ಷ ಪ್ರಶಾಂತ್ ಕಲ್ಲೂರು ಆರ್ಥಿಕ ನೆರವು ಒದಗಿಸಿದ್ದಾರೆ. ಎರಡು ಸಾವಿರ ಮೌಲ್ಯದ ದಿನಸಿ ಕಿಟ್ ಮತ್ತು ೧೦ ಸಾವಿರ ನಗದನ್ನು ಸ್ಥಳೀಯ ಪ್ರಮುಖರ ಮೂಲಕ ನಾಗೇಶ್ ಮತ್ತು ಲತಾ ದಂಪತಿಗೆ ಹಸ್ತಾಂತರ ಮಾಡಲಾಯಿತು. ಮುಂದಿನ ದಿನಗಳಲ್ಲಿ ಚಿಕಿತ್ಸೆಗೆ ಅಗತ್ಯ ನೆರವು ನೀಡುವ ಭರವಸೆಯನ್ನು ಪ್ರಶಾಂತ್ ಕಲ್ಲೂರು ನೀಡಿ ದಂಪತಿಗೆ ಧೈರ್ಯ ತುಂಬಿದ್ದಾರೆ.

ಈ ಸಂದರ್ಭ ವೀರಶೈವ ಲಿಂಗಾಯತ ಯುವ ವೇದಿಕೆ ಮುಖಂಡ ಕೆ.ಡಿ. ಪ್ರಶಾಂತ್, ಮಂಜುನಾಥ್, ಕುಶಾಲನಗರ ತಾಲೂಕು ಅಧ್ಯಕ್ಷ ಭರತ್, ಜಿಲ್ಲಾ ಸಂಚಾಲಕ ಸಾಗರ್, ಸದಸ್ಯ ಮನು, ಗ್ರಾ.ಪಂ. ಸದಸ್ಯೆ ಚೈತ್ರ ಮಂಜುನಾಥ, ಮಂಜುನಾಥ ಗುರುಲಿಂಗಪ್ಪ ಮತ್ತಿತರರು ಇದ್ದರು.