ಕಡಂಗ, ಆ. ೨೬: ಚೇರಂಬಾಣೆ ಅರುಣ ವಿದ್ಯಾಸಂಸ್ಥೆಯ ಹಳೆಯ ವಿದ್ಯಾರ್ಥಿ ಕೊಳಗದಾಳು ಗ್ರಾಮದ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಬಡ್ಡಿರ ಎಂ. ಪೊನ್ನಪ್ಪ ಅವರು ಕೋವಿಡ್-೧೯ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಆರೋಗ್ಯದ ಮೇಲಿನ ಹಿತದೃಷ್ಟಿಯಿಂದ ವಿದ್ಯಾಸಂಸ್ಥೆಗೆ ಪಲ್ಸ್ ಆಕ್ಸಿಮೀಟರ್ ಹಾಗೂ ಥರ್ಮಲ್ ಸ್ಕಾö್ಯನರ್ ಉಪಕರಣವನ್ನು ಶಾಲೆಗೆ ನೀಡಿದ್ದಾರೆ.