ಗುಡ್ಡೆಹೊಸೂರು, ಆ. ೨೪: ಇಲ್ಲಿಗೆ ಸಮೀಪದ ಬಸವನಹಳ್ಳಿಯ ರಾಷ್ಟಿçÃಯ ಹೆದ್ದಾರಿ ಹೇರೂರು ರಸ್ತೆಯ ಸಮೀಪ ಮಾರುತಿ ವ್ಯಾನ್ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿ ಹೇರೂರು ಗ್ರಾಮದ ನಿವಾಸಿ ತೆಕ್ಕಡೆ ರಂಜು ಎಂಬವರಿಗೆ ಗಂಭೀರ ಗಾಯವಾಗಿ ಮೈಸೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ.

ರಂಜು ಗುಡ್ಡೆಹೊಸೂರಿನಿಂದ ತಮ್ಮ ಮನೆ ಹೇರೂರಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ಸಂದÀರ್ಭ ಮಡಿಕೇರಿ ಕಡೆಯಿಂದ ಆಗಮಿಸಿದ ಮಾರುತಿ ವ್ಯಾನ್ ನಡುವೆ ಅಪÀಘಾತ ಸಂಭವಿಸಿದೆ. ಆನೆಕಾಡಿನ ಬಳಿ ಪೊಲೀಸ್ ಇಂಟರ್‌ಸೆಪ್ಟರ್ ವಾಹನದವರು

(ಮೊದಲ ಪುಟದಿಂದ) ತಪಾಸಣೆ ನಡೆಸುತ್ತಿದ್ದರು. ಆ ಸಂದರ್ಭ ವ್ಯಾನ್ ನಿಲ್ಲಿಸಲು ಪೊಲೀಸರು ಸೂಚಿಸಿದ್ದಾರೆ. ಆದರೆ ವ್ಯಾನ್ ಚಾಲಕ ನಿಲ್ಲಿಸದೆ ಅದೇ ವೇಗದಲ್ಲಿ ವಾಹನ ಚಾಲನೆ ಮಾಡಿಕೊಂಡು ಹೋಗಿದ್ದು, ಬೈಕ್‌ಗೆ ಡಿಕ್ಕಿಯಾಗಿರುವುದಾಗಿ ತಿಳಿದು ಬಂದಿದೆ.

ರAಜು ಅವರ ಕಾಲು ಮುರಿತಕ್ಕೆ ಒಳಗಾಗಿದ್ದು, ಕಿವಿ, ಮೂಗಿನಲ್ಲಿ ರಕ್ತ ಸೋರುತ್ತಿದೆ. ಗಂಭೀರ ಸ್ಥಿತಿಯಲ್ಲಿರುವ ಅವರನ್ನು ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಈ ಬಗ್ಗೆ ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

-ಕುಡೆಕಲ್ ಗಣೇಶ್, ಚಿತ್ರ: ಟಿ.ಜಿ. ಸತೀಶ್