ಶನಿವಾರಸಂತೆ, ಜು. ೨೮: ಸಮೀಪದ ಕೊಡ್ಲಿಪೇಟೆಯಲ್ಲಿ ದ.ಸಂ.ಸ. ವತಿಯಿಂದ ಪದಾಧಿಕಾರಿಗಳು ಸೋಮವಾರ ಅನಾರೋಗ್ಯದಿಂದ ಮೃತಪಟ್ಟ ಶನಿವಾರಸಂತೆಯ ನಿವೃತ್ತ ಮುಖ್ಯ ಶಿಕ್ಷಕ ಹಾಗೂ ದ.ಸಂ.ಸ. ಪದಾಧಿಕಾರಿ, ಸಮುದಾಯದ ಹೋರಾಟಗಾರ ಎಂ.ಜಿ. ಶಿವಶಂಕರ್ ಮಾಸ್ಟರ್ (೬೨) ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು.

ದ.ಸಂ.ಸ. ಮುಖಂಡರಾದ ಡಿ.ವಿ. ಜಗದೀಶ್, ಡಿ.ಸಿ. ಸೋಮಣ್ಣ, ಕಾಳಯ್ಯ ಮಾಸ್ಟರ್, ಡಿ.ಆರ್. ವೇದಕುಮಾರ್, ಗ್ರಾಮ ಪಂಚಾಯಿತಿ ಸದಸ್ಯರಾದ ಡಿ.ಎನ್. ವಸಂತ್, ಸತ್ಯಪ್ರಕಾಶ್, ಹೇಮಂತ್, ಸುರೇಶ್ ಕಲ್ಲಹಳ್ಳಿ, ಮಂಜುನಾಥ್, ವಿಜಯ್, ಕೆಂಚಪ್ಪ ಇತರರು ಹಾಜರಿದ್ದರು.