ಶನಿವಾರಸಂತೆ, ಜೂ. ೨೨ : ನೆರೆಯ ಹಾಸನ ಜಿಲ್ಲೆಯ ಹೆತ್ತೂರಿನಿಂದ ಹುಣಸೂರಿನವರೆಗೆ ವಿವಿಧ ಮೊಬೈಲ್ ಟವರ್ಗಳ ಜನರೇಟರ್ಗಳಿಗೆ ಹಾಕುತ್ತಿದ್ದ ಡೀಸೆಲ್ ಅನ್ನು ಕಳವು ಮಾಡುತ್ತಿದ್ದ ಖದೀಮರ ತಂಡ ಗುತ್ತಿಗೆದಾರರ ಕೈಗೆ ಸಿಕ್ಕಿಬಿದ್ದ ಘಟನೆ ಮಂಗಳವಾರ ನಡೆದಿದೆ.
ಶನಿವಾರಸಂತೆ ಸಮೀಪದ ಮಾಲಂಬಿ ಗ್ರಾಮದಲ್ಲಿ ಜಿಯೋ ಟವರ್ನ ಜನರೇಟರ್ಗೆ ಹಾಕಿದ್ದ ಡಿಸೇಲ್ ಕದಿಯುತ್ತಿದ್ದ ಸಂದರ್ಭ ಬೀಟಿಕಟ್ಟೆ ಗ್ರಾಮದ ಟವರ್ ಗುತ್ತಿಗೆದಾರ ಕಾದು ಕುಳಿತು ಮುಂಜಾನೆ ೪ ಗಂಟೆಯ ಸಮಯದಲ್ಲಿ ಕಳ್ಳರ ತಂಡವನ್ನು ಬೆನ್ನಟ್ಟಿದ್ದಾರೆ. ಚಲಿಸುತ್ತಿದ್ದ ಕಾರಿನ ಚಕ್ರಕ್ಕೆ ಗುಂಡು ಹೊಡೆದ ಪರಿಣಾಮ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿ ಚರಂಡಿಗೆ ಸಿಲುಕಿಕೊಂಡಿದೆ.
ಕಾರನ್ನು ಸ್ಥಳದಲ್ಲೇ ಬಿಟ್ಟು ಕಳ್ಳರು ಪರಾರಿಯಾಗಿದ್ದು, ಕಾರಿನೊಳಗೆ ೨ ಕ್ಯಾನ್ನಲ್ಲಿ ತುಂಬಿಸಿದ್ದ ಡಿಸೇಲ್ ಪತ್ತೆಯಾಗಿದೆ. ಕಾರನ್ನು ವಶಪಡಿಸಿಕೊಂಡು ಶನಿವಾರಸಂತೆ ಪೊಲೀಸ್ ಠಾಣೆಗೆ ಕೊಂಡೊಯ್ಯಲಾಗಿದೆ.