ನಾಪೋಕ್ಲು, ಮೇ ೨೧: ಕಳೆದ ಎರಡು ದಿನಗಳ ಹಿಂದೆ ಸುರಿದ ಮಳೆ, ಗಾಳಿಯಿಂದಾಗಿ ಕೊಳಕೇರಿ ಗ್ರಾಮದ ಕುವಲೆಕಾಡು ನಿವಾಸಿ ಕೆ.ಎ. ಸಫೀಯ ಎಂಬವರ ಮನೆಯ ಮೇಲೆ ಮರ ಬಿದ್ದು ಅಡುಗೆ ಕೋಣೆಯ ಶೀಟ್‌ಗಳು ಹಾನಿಗೊಳಗಾಗಿ ನಷ್ಟ ಸಂಭವಿಸಿದೆ. ಗ್ರಾ.ಪಂ. ಪಿ.ಡಿ.ಓ. ಚೊಂದಕ್ಕಿ, ಕಂದಾಯ ಪರಿವೀಕ್ಷಕ ರವಿ, ಗ್ರಾಮ ಲೆಕ್ಕಿಗೆ ಅಮ್ರತಾ, ಗ್ರಾ.ಪಂ. ಸದಸ್ಯರಾದ ಕೆ.ವೈ. ಅಶ್ರಫ್, ಕುಲ್ಲೇಟಿರ ಹೇಮಾವತಿ ಘಟನೆ ನಡೆದ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು.