*ವೀರಾಜಪೇಟೆ, ಮೇ ೨೧: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ೮೮ ನೇ ಹುಟ್ಟುಹಬ್ಬದ ಪ್ರಯುಕ್ತ ಇಂದು ವೀರಾಜಪೇಟೆಯಲ್ಲಿ ಸುಮಾರು ೧೨೫ ಮಂದಿ ಕೊರೊನಾ ವಾರಿಯರ್ಸ್ಗೆ ಮಧ್ಯಾಹ್ನ ಊಟವನ್ನು ವಿತರಿಸಲಾಯಿತು. ವೀರಾಜಪೇಟೆಯ ಸರ್ಕಾರಿ ಆಸ್ಪತ್ರೆಯ ವೈದ್ಯರು, ದಾದಿಯರು, ಆಸ್ಪತ್ರೆಯ ಸಿಬ್ಬಂದಿಗಳು, ನಗರ ಪ್ರದೇಶದ ಪೊಲೀಸರು, ಹೋಮ್ ಗಾರ್ಡ್ಗಳು, ಬಿಕ್ಷುಕರು, ನಿರ್ಗತಿಕರು ಸೇರಿದಂತೆ ಸುಮಾರು ೧೨೫ ಮಂದಿಗೆ ಜೆಡಿಎಸ್ ತಾಲೂಕು ಅಧ್ಯಕ್ಷ ಮಂಜುನಾಥ್ ಪಿ.ಎ. ಅವರ ಮುಂದಾಳತ್ವದಲ್ಲಿ ಊಟ ವಿತರಿಸಲಾಯಿತು. ಈ ಸಂದರ್ಭ ಜೆಡಿಎಸ್ ತಾಲೂಕು ಸಾಮಾಜಿಕ ಜಾಲತಾಣದ ಘಟಕ ಅಧ್ಯಕ್ಷ ರಾಕೇಶ್ ಬಿದ್ದಪ್ಪ, ಜೆಡಿಎಸ್ ಮುಖಂಡ ಯೋಗೀಶ್ ನಾಯ್ಡು ಹಾಜರಿದ್ದರು.