ಶನಿವಾರಸಂತೆ, ಏ. ೩: ಸಮೀಪದ ಬ್ಯಾಡಗೊಟ್ಟ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮ ಪಂಚಾಯಿತಿಯ ಮಕ್ಕಳ ಗ್ರಾಮ ಸಭೆ ನಡೆಯಿತು.

ಪಂಚಾಯಿತಿ ಅಧ್ಯಕ್ಷೆ ವಿನೋದಾ ಅವರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮಸಭೆಯಲ್ಲಿ ಬ್ಯಾಡಗೊಟ್ಟ, ಬೆಂಬಳೂರು, ಊರುಗುತ್ತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದ ವಿದ್ಯಾರ್ಥಿಗಳ ಕುಂದುಕೊರತೆಗಳ ಅಹವಾಲು ಸಲ್ಲಿಸಿದರು.

ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸಿದ ಆಯಾ ವಿಭಾಗದ ಸದಸ್ಯರು ಸೂಕ್ತ ಪರಿಹಾರ ಕಲ್ಪಿಸುವ ಭರವಸೆ ನೀಡಿದರು. ಶಿಕ್ಷಣದ ಬಗ್ಗೆ ಸಿ.ಆರ್.ಪಿ. ಸುರೇಶ್, ಕೋವಿಡ್ ಕುರಿತು ಆಶಾ ಕಾರ್ಯಕರ್ತೆ ಎಂ.ಆರ್. ಚೆನ್ನಾಜಿ ಮಾಹಿತಿ ನೀಡಿದರು.

ಪಂಚಾಯಿತಿ ಉಪಾಧ್ಯಕ್ಷೆ ಪಾವನಾ, ಸದಸ್ಯರಾದ ಎಂ.ಎA. ಹನೀಫ್, ದಿನೇಶ್, ಮೋಕ್ಷಿತ್ ರಾಜ್, ಚಂದ್ರ, ಲೀನಾ, ರೇಣುಕಾ, ದಾಕ್ಷಾಯಿಣಿ ಮಾತನಾಡಿದರು.

ಪಿಡಿಒ ಹರೀಶ್, ಕಾರ್ಯದರ್ಶಿ ದೇವರಾಜ್, ಸಿಬ್ಬಂದಿ ಸಚಿನ್ ಧರ್ಮಪ್ಪ, ಉಮರ್, ಮುಖ್ಯ ಶಿಕ್ಷಕಿ ಭಾಗ್ಯ, ವಿವಿಧ ಶಾಲೆಗಳ ಶಿಕ್ಷಕರು ಹಾಜರಿದ್ದರು.