ಪೊನ್ನಂಪೇಟೆ, ಏ.೨: ಪೊನ್ನಂಪೇಟೆ ಕಿಗ್ಗಟ್‌ನಾಡ್ ಹಿರಿಯ ನಾಗರಿಕ ವೇದಿಕೆ ವತಿಯಿಂದ ಗೋಣಿಕೊಪ್ಪಲಿನ ಹಿರಿಯ ಚೇತನ ಆಧುನಿಕ ಗೋಣಿಕೊಪ್ಪಲಿನ ನಿರ್ಮಾತೃ, ಸಮಾಜ ಸೇವಕ, ೯೯ ವರ್ಷ ಪ್ರಾಯದ ಬುಟ್ಟಿಯಂಡ ರಾಜು ಅಪ್ಪಾಜಿಯವರನ್ನು ಅವರ ಮನೆಗೆ ತೆರಳಿ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು. ಈ ಸಂದರ್ಭ ಮಾತನಾಡಿದ ಕಿಗ್ಗಟ್‌ನಾಡ್ ಹಿರಿಯ ನಾಗರಿಕ ವೇದಿಕೆಯ ಪ್ರಧಾನ ಕಾರ್ಯದರ್ಶಿ ಜಿಮ್ಮಿ ಅಣ್ಣಯ್ಯ, ೯೯ ನೇ ವಯಸ್ಸಿನಲ್ಲಿಯೂ ಉತ್ಸಾಹದ ಚಿಲುಮೆಯಂತಿರುವ ಅಪ್ಪಾಜಿಯವರು ಶಾರೀರಿಕವಾಗಿ, ಮಾನಸಿಕವಾಗಿ ತಮ್ಮ ಆರೋಗ್ಯವನ್ನು ಕಾಪಾಡಿಕೊಂಡು ಬಂದಿದ್ದು, ಇಂದಿನ ಯುವಕರಿಗೆ ಹಾಗೂ ಸಮಾಜಕ್ಕೆ ಮಾದರಿ ವ್ಯಕ್ತಿಯಾಗಿದ್ದಾರೆ ಎಂದು ಬಣ್ಣಿಸಿದರು.

ವೀರಾಜಪೇಟೆ ತಾಲೂಕು ಹಿರಿಯ ನಾಗರಿಕ ವೇದಿಕೆ ಅಧ್ಯಕ್ಷ ಮುಲ್ಲೇಂಗಡ ಶಂಕರಿ ಪೊನ್ನಪ್ಪ, ಪೊನ್ನಂಪೇಟೆ ಕಿಗ್ಗಟ್‌ನಾಡ್ ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷ ಚೆಕ್ಕೆರ ಸನ್ನಿ ಸುಬ್ಬಯ್ಯ, ಕಾರ್ಯದರ್ಶಿ ಕಾಳಿಮಾಡ ಮೋಟಯ್ಯ, ಸಂಘಟನಾ ಕಾರ್ಯದರ್ಶಿ ಮಂಡೆಚAಡ ಗಣೇಶ್ ಗಣಪತಿ, ಸದಸ್ಯರಾದ ಡಿಕ್ಕಿ ಅಣ್ಣಯ್ಯ, ಪುಲಿಯಂಡ ಪಿ. ಪೊನ್ನಪ್ಪ, ರಾಷ್ಟçಪ್ರಶಸ್ತಿ ವಿಜೇತೆ ದೇಯಂಡ ಕಾವೇರಮ್ಮ, ಕೊಟ್ಟುಕತ್ತೀರ ಸೋಮಣ್ಣ, ತೀತಿರ ಜಯ ಅಯ್ಯಪ್ಪ, ಮದ್ರೀರ ಕರುಂಬಯ್ಯ ಹಾಗೂ ಮಮತ ಹಾಜರಿದ್ದರು. ಪುಟಾಣಿಗಳಾದ ಸೌಜನ್ಯ ಹಾಗೂ ಸೋನು ಪ್ರಾರ್ಥಿಸಿದರು. ಛಾಯಾದೇವಿ ಕಾರ್ಯಕ್ರಮ ನಿರೂಪಿಸಿದರು.