ಮಡಿಕೇರಿ, ಏ. ೨: ತನ್ನ ಪತ್ನಿ ಹಾಗೂ ಮಗಳ ಕಿರುಕುಳ ತಾಳಲಾರದೆ ತಾನು ಸಾಯುತ್ತಿದ್ದೇನೆ ಎಂಬದಾಗಿ ವ್ಯಕಿಯೋರ್ವ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ಮಡಿಕೇರಿ ತಾಲೂಕಿನ ಮರಗೋಡು ಗ್ರಾಮದಲ್ಲಿ ನಡೆದಿದೆ.

ಮರಗೋಡು ಗ್ರಾಮದ ನಿವಾಸಿ ಭರತ್ (೫೫) ಮೃತ ದುರ್ದೈವಿ. ಇತ್ತೀಚೆಗೆ ತನ್ನ ಹಿರಿಯ ಪುತ್ರಿ ಹಾಗೂ ಪತ್ನಿ ಭರತ್ ಮೇಲೆಯೇ ಅತ್ಯಾಚಾರ ಆರೋಪ ಮಾಡಿದ್ದಲ್ಲದೆ, ಲಕ್ಷಾಂತರ ರೂ. ಹಣದ ಬೇಡಿಕೆ ಇಟ್ಟಿದ್ದರು ಎಂದು ಭರತ್ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಈ ಸಂಬAಧ ನ್ಯಾಯಾಲಯದಲ್ಲಿ ಮೊಕದ್ದಮೆ ಎದುರಿಸಬೇಕಾಯಿತು ಎಂದು ಈ ಪತ್ರದಲ್ಲಿ ಬರೆದುಕೊಂಡಿದ್ದಾರೆ.

ತನ್ನ ಬಳಿ ಲಕ್ಷಗಟ್ಟಲೆ ಹಣವನ್ನು ಕೇಳಿದ್ದಾರೆ. ತನ್ನ ಬಳಿ ಯಾವುದೇ ಆಸ್ತಿಪಾಸ್ತಿ ಇಲ್ಲವೆಂದು ಭರತ್ ಡೆತ್‌ನೋಟ್‌ನಲ್ಲಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಈ ಸಂಬAಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.