ಸುಂಟಿಕೊಪ್ಪ, ಮಾ. ೨೬: ಸುಂಟಿಕೊಪ್ಪ ಹೋಬಳಿ ರಕ್ಷಣಾ ವೇದಿಕೆಯ ವತಿಯಿಂದ ಆಟೋರಿಕ್ಷಾ ಚಾಲಕನಿಗೆ ಚಿಕಿತ್ಸೆಗೆ ಧನ ಸಹಾಯ ನೀಡಲಾಯಿತು.

ಪನ್ಯ ನಿವಾಸಿ ಆಟೋ ಚಾಲಕ ಸುಂದರ ಎಂಬವರು ಇತ್ತೀಚೆಗೆ ಆಟೋರಿಕ್ಷಾ ಚಲಾಯಿಸುತ್ತಿದ್ದ ಸಂದರ್ಭ ಆಟೋ ಅವಘಡಗೊಂಡಿದ್ದು, ಬೆನ್ನುಮೂಳೆ ಮುರಿತದಿಂದ ಚಿಕಿತ್ಸೆ ಪಡೆಯುತ್ತಿದ್ದು ರಕ್ಷಣಾ ವೇದಿಕೆಯ ಸುಂಟಿಕೊಪ್ಪ ಹೋಬಳಿ ಘಟಕದ ಅಧ್ಯಕ್ಷ ನಾಗೇಶ್ ಪೂಜಾರಿ, ಕಾರ್ಯದರ್ಶಿ ಸಂತೋಷ್ ದೀನು, ಗೌರವ ಅಧ್ಯಕ್ಷ ಗ್ಯಾಬ್ರಿಯಲ್ ಡಿಸೋಜ, ಉಪಾಧ್ಯಕ್ಷ ವಿಶ್ವನಾಥ್, ಮನು, ಮಂಜು, ಸಹ ಕಾರ್ಯದರ್ಶಿ ಸಿಕಂದರ್ ಶರೀಫ್, ಸಲಹೆಗಾರರು ನಾರಾಯಣ, ತೋಮಸ್, ಹಮೀದ್ ಹಾಗೂ ಅಶೋಕ್ ಅವರುಗಳು ತೆರಳಿ ಗಾಯಾಳು ಸುಂದರ ಅವರಿಗೆ ಸಾಂತ್ವನ ಹೇಳಿ ರೂ ೬,೦೦೦ ಧನ ಸಹಾಯ ನೀಡಿದರು.