ಗೋಣಿಕೊಪ್ಪ ವರದಿ, ಮಾ. ೮ : ಕುಟ್ಟ ಸಮೀಪದ ಕಾಯಿಮಾನಿಯಲ್ಲಿ ಬೆಳೆಗಾರನ ಮೇಲೆ ಕಾಡುಕೋಣ ದಾಳಿ ನಡೆಸಿರುವ ಘಟನೆ ಸೋಮವಾರ ಮಧ್ಯಾಹ್ನ ಸುಮಾರಿಗೆ ಸಂಭವಿಸಿದೆ. ಚೋಕೀರ ಪೂವಯ್ಯ (೭೮) ಗಾಯಗೊಂಡ ಬೆಳೆಗಾರ.

ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಕಾಡುಕೋಣ ಏಕಾಏಕಿ ದಾಳಿ ನಡೆಸಿದೆ. ಪರಿಣಾಮ ಪೂವಯ್ಯ ಅವರ ಕಾಲು ಸೀಳಿದೆ. ಎಡ ಕಾಲಿಗೆ ಗಾಯವಾಗಿದೆ. ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.