ಸೋಮವಾರಪೇಟೆ, ಮಾ. ೬: ಇಲ್ಲಿನ ಜೇಸಿಐ ಸೋಮವಾರಪೇಟೆ ಪುಷ್ಪಗಿರಿ ಹಿಲ್ಸ್ ಸಂಸ್ಥೆಯ ವತಿಯಿಂದ "ಸೆಲ್ಯೂಟ್ ದಿ ಸೈಲೆಂಟ್ ವರ್ಕರ್" ಎಂಬ ಕಾರ್ಯಕ್ರಮ ಚೆಸ್ಕಾಂ ಕಚೇರಿಯಲ್ಲಿ ನಡೆಯಿತು. ಕಾರ್ಯಕ್ರಮದ ಪ್ರಯುಕ್ತ ಇಲಾಖೆಯ ವಿದ್ಯುತ್ ಮಾರ್ಗದಾಳು ವಿಜಯಕುಮಾರ್ ಅವರನ್ನು ಸನ್ಮಾನಿಸಲಾಯಿತು.

ಅಧ್ಯಕ್ಷತೆಯನ್ನು ಜೇಸಿ ಅಧ್ಯಕ್ಷೆ ಮಾಯಾ ಗಿರೀಶ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಇಲಾಖೆಯ ಸಹಾಯಕ ಅಭಿಯಂತರ ಮನು ಕುಮಾರ್, ಸಂಸ್ಥೆಯ ಕಾರ್ಯದರ್ಶಿ ನೆಲ್ಸನ್, ಜೇಸಿರೇಟ್ ಪವಿತ್ರಾ ಲಕ್ಷಿö್ಮÃಕುಮಾರ್, ಪದಾಧಿಕಾರಿಗಳಾದ ರಾಜೇಶ್, ಜಗದಾಂಬ ಸೇರಿದಂತೆ ಇತರರು ಉಪಸ್ಥಿತರಿದ್ದರು. ಈ ಸಂದರ್ಭ ಇಲಾಖೆಯ ೪೦ ಮಾರ್ಗದಾಳುಗಳಿಗೆ ಅಭಿನಂದನಾ ಪತ್ರವನ್ನು ವಿತರಿಸಲಾಯಿತು.