ಕುಶಾಲನಗರ, ಫೆ. ೨೪: ಕುಶಾಲನಗರ-ಮಡಿಕೇರಿ ಹೆದ್ದಾರಿ ರಸ್ತೆಯ ತಾವರೆಕೆರೆ ಬಳಿ ರಸ್ತೆ ಬಿರುಕು ಉಂಟಾಗಿ ಸಂಚಾರಕ್ಕೆ ವ್ಯತ್ಯಯ ಉಂಟಾಗಿದೆ. ತಾವರೆಕೆರೆ ಬಳಿ ರಸ್ತೆಯ ನಡು ಭಾಗದಲ್ಲಿ ಬೃಹತ್ ಬಿರುಕು ಕಾಣಿಸಿಕೊಂಡು ಗುಂಡಿ ಬಿದ್ದ ಹಿನ್ನೆಲೆಯಲ್ಲಿ ಸಂಚಾರಕ್ಕೆ ತೊಡಕುಂಟಾಗಿದ್ದು ಸ್ಥಳೀಯರು ಕಲ್ಲುಗಳನ್ನು ತುಂಬಿಸಿ ಸಂಭವಿಸಲಿರುವ ಅಪಾಯ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಾಹನ ಸವಾರರಿಗೆ ತಕ್ಷಣ ಗಮನಕ್ಕೆ ಬರದ ಹಿನ್ನೆಲೆಯಲ್ಲಿ ಕೆಲವು ದ್ವಿಚಕ್ರ ವಾಹನ ಸವಾರರು ಅಪಘಾತಕ್ಕೆ ಒಳಗಾಗಿ ಅಲ್ಪಸ್ವಲ್ಪ ಗಾಯಗೊಂಡ ಘಟನೆಯೂ ನಡೆಯಿತು. ಒಂದೆಡೆ ಕೆರೆ, ಇನ್ನೊಂದೆಡೆ ರಸ್ತೆಯ ತಡೆಗೋಡೆ ಹಿನ್ನೆಲೆಯಲ್ಲಿ ರಸ್ತೆಯು ಕಿರಿದಾಗಿದ್ದು ಭಾರೀ ವಾಹನಗಳಿಗೆ ಓಡಾಟಕ್ಕೆ ಕೂಡ ಅನಾನುಕೂಲ ಉಂಟಾಗಿದ್ದು ಅಲ್ಲದೆ ರಾತ್ರಿ ವೇಳೆ ಅಪಘಾತದ ಸಾಧ್ಯತೆ ಕಾರಣ ತಕ್ಷಣ ಸಂಬAಧಿಸಿದವರು ದುರಸ್ಥಿಪಡಿಸುವಂತೆ ಸ್ಥಳೀಯರಾದ ಕೆ.ಜಿ. ಮನು, ಕೆ.ಟಿ. ಯೋಗೀಶ್, ಎಂ.ಡಿ. ಕೃಷ್ಣಪ್ಪ ಮತ್ತಿತರರು ಆಗ್ರಹಿಸಿದ್ದಾರೆ.