ಕುಶಾಲನಗರ, ಫೆ. ೧೬: ಕುಶಾಲನಗರ ತಾಲೂಕು ಪ್ರೆಸ್‌ಕ್ಲಬ್ ಸ್ಥಾಪನೆಯಾಗಿದ್ದು ಅಧ್ಯಕ್ಷರಾಗಿ ಎಂ.ಎನ್. ಚಂದ್ರಮೋಹನ್ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ರಘು ಹೆಬ್ಬಾಲೆ, ಖಜಾಂಚಿಯಾಗಿ ಸುನಿಲ್ ಪೊನ್ನೇಟಿ, ಟ್ರಸ್ಟಿಗಳಾಗಿ ಭೋಜಣ್ಣ ರೆಡ್ಡಿ, ಕೆ.ಎಸ್. ಮೂರ್ತಿ, ಕೆ.ಕೆ. ನಾಗರಾಜಶೆಟ್ಟಿ, ವನಿತಾ ಚಂದ್ರಮೋಹನ್, ವಿನೋದ್, ಕೆ.ಎಸ್. ನಾಗೇಶ್ ಮತ್ತು ಲೋಕೇಶ್ ಸಾಗರ್ ಆಯ್ಕೆಯಾಗಿದ್ದಾರೆ.

ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಸಾಮಾಜಿಕ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಮತ್ತು ಪತ್ರಿಕಾ ಮಾಧ್ಯಮ ಸದಸ್ಯರ ಕ್ಷೇಮಾಭಿವೃದ್ಧಿ ಯೊಂದಿಗೆ ಸಾಮಾಜಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಉದ್ದೇಶದೊಂದಿಗೆ ಟ್ರಸ್ಟ್ ರಚಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್ ತಿಳಿಸಿದ್ದಾರೆ.

ನೂತನ ಪ್ರೆಸ್‌ಕ್ಲಬ್ ಅನ್ನು ಮಾರ್ಚ್ ಪ್ರಥಮ ವಾರದಲ್ಲಿ ಉದ್ಘಾಟನೆಗೊಳಿಸಲು ಟ್ರಸ್ಟ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.