ಕಣಿವೆ, ಫೆ. ೧೩: ಮುಳ್ಳುಸೋಗೆ ಕುವೆಂಪು ಬಡಾವಣೆಯ ನಿವಾಸಿಗಳು ಕಳೆದ ಮೂರು ವರ್ಷಗಳಿಂದ ಕಾವೇರಿ ನದಿ ಪ್ರವಾಹದ ಬಳಿಕ ಮೂಲ ಸೌಕರ್ಯಗಳಿಂದ ವಂಚಿತಗೊAಡು ಅನುಭವಿಸುತ್ತಿರುವ ನರಕ ಯಾತನೆಯ ಕುರಿತಾಗಿ ಶಕ್ತಿ ಯಲ್ಲಿ ಪ್ರಕಟವಾಗಿ

ದ್ದ "ಬಡಾವಣೆಯ ದ್ವಾರದಲ್ಲಿ ಸಮಸ್ಯೆಗಳ ತೋರಣ" ಎಂಬ ಬಡಾವಣೆಯ ಸಮಸ್ಯಾತ್ಮಕ ವರದಿಯ ಪತ್ರಿಕೆಯ ಪ್ರತಿಯನ್ನು ಬಡಾವಣೆಯ ನಿವಾಸಿಗಳು ಕೇಂದ್ರ ಸಚಿವ ಸದಾನಂದ ಗೌಡ ಅವರಿಗೆ ಕೊಟ್ಟು ತಮ್ಮ ಯಾತನೆಗಳನ್ನು ತೋಡಿಕೊಂಡಿದ್ದರು. ಬಡಾವಣೆಯ ನಿವಾಸಿಗಳ ಆಗ್ರಹ ಹಾಗೂ ಪತ್ರಿಕೆಯಲ್ಲಿ ಬಂದ ವರದಿಯಿಂದ ಮನವರಿಕೆಯಾದ ಕೇಂದ್ರ ಸಚಿವರು ರಾಜ್ಯ ಕಂದಾಯ ಮಂತ್ರಿ ಅಶೋಕ್ ಅವರಿಗೆ ಪತ್ರ ಬರೆದು ಕುಶಾಲನಗರದ ಮುಳ್ಳುಸೋಗೆ ಪಂಚಾಯಿತಿಯ ಕುವೆಂಪು ಬಡಾವಣೆಗೆ ಮೂಲ ಸೌಕರ್ಯಗಳನ್ನು ಒದಗಿಸುವಂತೆ ನಿರ್ದೇಶನ ನೀಡಿದ್ದಾರೆ. ಕೇಂದ್ರ ಸಚಿವ ಸದಾನಂದ ಗೌಡ ಅವರ ಸ್ಪಂದನ ಹಾಗೂ ಶಕ್ತಿ ಪತ್ರಿಕೆಯಲ್ಲಿ ಬಂದ ವರದಿಗೆ ಕುವೆಂಪು ಬಡಾವಣೆ ನಿವಾಸಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.