ಮಡಿಕೇರಿ, ಜ. ೬: ವ್ಯಕ್ತಿ ಯೋರ್ವರು ನಾಪತ್ತೆಯಾಗಿರುವ ಕುರಿತು ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಠಾಣಾ ವ್ಯಾಪ್ತಿಯ ವೆಸ್ಟ್ ನೆಮ್ಮಲೆ ಗ್ರಾಮದಲ್ಲಿ ಕಾರ್ಮಿಕರಾಗಿದ್ದ ಪಿ.ಪಿ. ಸುರೇಶ್ ಎಂಬವರು ಕಳೆದ ೧೦ ತಿಂಗಳಿAದ ಮನೆಗೆ ಬಂದಿಲ್ಲ. ಕೂಲಿ ಕೆಲಸಕ್ಕೆಂದು ಬೇರೆ ಬೇರೆ ಕಡೆ ತೆರಳುತ್ತಿದ್ದ ಅವರು, ತಾವಾಗಿಯೇ ಸಂಪರ್ಕಿಸುತ್ತಿದ್ದರು.

ಇದೀಗ ಅವರ ಸುಳಿವು ಇಲ್ಲವಾಗಿದೆ ಎಂದು ಅವರ ಪುತ್ರ ಸೋಮಣ್ಣ ಪಿ.ಎಸ್. ದೂರು ನೀಡಿದ್ದು, ಇವರ ಬಗ್ಗೆ ಮಾಹಿತಿ ದೊರೆತಲ್ಲಿ ೨೪೬೨೪೬-೨೨೯೦೦೦ಗೆ ತಿಳಿಸಲು ಪೊಲೀಸ್ ಪ್ರಕಟಣೆ ಕೋರಿದೆ.