ವೀರಾಜಪೇಟೆ, ಡಿ. ೨೮: ಸಮೀಪದ ಕದನೂರು-ಕೊಟ್ಟೋಳಿ ಕೊಡವ ಸಂಘದ ೧೭ನೇ ವಾರ್ಷಿಕೋತ್ಸವ ವೀರಾಜಪೇಟೆ ಕೊಡವ ಸಮಾಜ ಸಭಾಂಗಣದಲ್ಲಿ ನಡೆಯಿತು. ಅಖಿಲ ಕೊಡವ ಸಮಾಜದ ಅಧ್ಯಕ್ಷ ಮಾತಂಡ ಸಿ. ಮೊಣ್ಣಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ಬೊಳ್ಳಚಂಡ ಕಿಶೋರಿ ಅಯ್ಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಅಮ್ಮುಣಿಚಂಡ ಯಮುನಾ ಅರಸು ಕಳೆದ ಸಭೆಯ ವರದಿಯನ್ನು ಮಂಡಿಸಿದರು.

ಶೈಕ್ಷಣಿಕ ಸಾಧನೆಗೈದ ಸಂಘದ ಸದಸ್ಯರ ಮಕ್ಕಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಪ್ರಮುಖರಾದ ಕಲಿಯಂಡ ಉತ್ತಪ್ಪ, ಕುಂಬೇರ ರಮೇಶ್ ಅಯ್ಯಪ್ಪ ಹಾಗೂ ಅಮ್ಮುಣಿಚಂಡ ರವಿ ಉತ್ತಪ್ಪ ಮಾತನಾಡಿದರು. ಅಮ್ಮುಣಿಚಂಡ ಪ್ರವೀಣ್ ನೇತೃತ್ವದ ತಂಡದ ಬೊಳಕಾಟ್ ಹಾಗೂ ಇತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕೊಟ್ಟಂಗಡ ರಾಧಾ ಗಣಪತಿ ನಿರೂಪಿಸಿ, ಕೋಣೇರಿರ ವಿನಯ್ ನಾಣಯ್ಯ ವಂದಿಸಿದರು.