ಸೋಮವಾರಪೇಟೆ, ಡಿ. 20: ಇಲ್ಲಿನ ಕೊಡವ ಸಮಾಜದ ಆಶ್ರಯದಲ್ಲಿ ತಾ. 25 ರಂದು ಪೂರ್ವಾಹ್ನ 10.30ಕ್ಕೆ ಸಮಾಜದ ಸಭಾಂಗಣದಲ್ಲಿ ಪುತ್ತರಿ ಊರೊರ್ಮೆ ಆಯೋಜಿಸಲಾಗಿದೆ ಎಂದು ಸಮಾಜದ ಅಧ್ಯಕ್ಷ ಮಾಳೇಟಿರ ಅಭಿಮನ್ಯುಕುಮಾರ್ ತಿಳಿಸಿದ್ದಾರೆ. ಕಾರ್ಯಕ್ರಮವನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಎಸಿಎಫ್ ಮಂಡುವಂಡ ಎಸ್. ಚಂಗಪ್ಪ, ಉದ್ಯಮಿ ಕೊಂಗಂಡ ವಿನಯ್ ಸೋಮಯ್ಯ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.