ಕೂಡಿಗೆ, ಡಿ. 12: ಕೂಡಿಗೆ ಕೊಪ್ಪಲು ಗ್ರಾಮದ ಲೋಕೇಶ್ ಎಂಬಾತ ಕುಶಾಲನಗರದಲ್ಲಿ ಮನೆ ನಿರ್ಮಾಣದ ಕೆಲಸದಲ್ಲಿ ತೊಡಗಿದ್ದ ಸಂದರ್ಭ ವಿದ್ಯುತ್ ತಗುಲಿ ಆಸ್ಪತ್ರೆ ಸೇರಿದ್ದ ಕಾರ್ಮಿಕ ಸಾವನ್ನಪ್ಪಿದ್ದಾನೆ.

ಕೂಡಿಗೆ ಕೊಪ್ಪಲು ಗ್ರಾಮದ ಕೃಷ್ಣಪ್ಪ ಎಂಬವರ ಮಗ ಲೋಕೇಶ್ (35) ಎಂಬಾತ ಕುಶಾಲನಗರದಲ್ಲಿ ಮನೆಯೊಂದರ ಎರಡನೇ ಮಹಡಿಯ ಮೇಲಿನ ಭಾಗಕ್ಕೆ ಕಾಂಕ್ರೀಟ್ ಹಾಕುವ ಸಂದರ್ಭ ಆಕಸ್ಮಿಕವಾಗಿ ವಿದ್ಯುತ್ ತಗುಲಿದ ಪರಿಣಾಮ ಮಹಡಿಯಿಂದ ಕೆಳಭಾಗಕ್ಕೆ ಎಸೆಯಲ್ಪಟ್ಟು ಸೊಂಟ ಮುರಿತಕ್ಕೊಳಗಾಗಿ ಹತ್ತು ದಿನಗಳು ಕಳೆದಿತ್ತು. ಮೈಸೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಲೋಕೇಶ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.