ಕೂಡಿಗೆ, ಡಿ. 11: ಕೂಡಿಗೆಯ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ಕಾರ್ತಿಕ ಮಾಸದ ವಿಶೇಷ ಪೂಜೆ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನಡೆಯುತ್ತಿದೆ. ಕಾರ್ತಿಕ ಮಾಸದ ಪೂಜೆಯು ಆಯಾ ಗ್ರಾಮದ ಗ್ರಾಮ ದೇವತೆ ದೇವಾಲಯಗಳಲ್ಲಿ ಸಂಪ್ರದಾಯ ಬಸವೇಶ್ವರ ಪೂಜೆ ಸೇರಿದಂತೆ ವಿಶೇಷ ಪೂಜೆಗಳು ಹೆಬ್ಬಾಲೆ, ತೊರೆನೂರು, ಶಿರಂಗಾಲ, ಕೂಡುಮಂಗಳೂರು, ಕೂಡಿಗೆ ಗ್ರಾಮಗಳಲ್ಲಿ ಈ ಬಾರಿ ಕೊರೊನಾ ಹಿನ್ನೆಲೆ ಸರಳವಾಗಿ ನಡೆಯುತ್ತಿವೆ. ಕಾರ್ತಿಕ ಮಾಸದ ಕೊನೆಯ ದಿನ ಆಚರಣೆ ಮಾಡುವ ದೀಪೆÇೀತ್ಸವ ಕಾರ್ಯಕ್ರಮವು ಸಹ ಸರಳವಾಗಿ ಆಯಾ ದೇವಾಲಯಗಳಲ್ಲಿ ನಡೆಯಲಿದೆ ಎಂದು ದೇವಾಲಯ ಸಮಿತಿಯ ಅಧ್ಯಕ್ಷ ಕೆ.ಕೆ. ಭೀಮಣ್ಣ ತಿಳಿಸಿದ್ದಾರೆ.