ಶನಿವಾರಸಂತೆ, ಅ. 29: ಬೆಂಬಳೂರು ಗ್ರಾಮದ ನಿವಾಸಿ ಪ್ರಸನ್ನ (37) ಎಂಬವರು ತಾ. 26ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಬೆಂಬಳೂರು ಗ್ರಾಮದ ನಿವಾಸಿ ಅವಿವಾಹಿತ ಪ್ರಸನ್ನ ಊರಿನಲ್ಲಿ ಸಾಲ ಮಾಡಿಕೊಂಡು ತೀರಿಸಲಾಗದೆ ಮಾನಸಿಕವಾಗಿ ಕೊರಗುತ್ತಿದ್ದರು ಎನ್ನಲಾಗುತ್ತಿದ್ದು, ತಾ. 26ರ ಸಂಜೆ ಗದ್ದೆಯ ಹತ್ತಿರ ವಿಷ ಕುಡಿದು ನರಳಾಡುತ್ತಿದ್ದು, ಶನಿವಾರಸಂತೆ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಹಾಸನದ ಎಸ್.ಎಸ್.ಎಂ. ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆ ಯುಸಿರೆಳೆದಿದ್ದಾರೆ.