ಮಡಿಕೇರಿ, ಅ. 22: ಕೊಡಗು ಜಿಲ್ಲೆಯಲ್ಲಿ ಈಗಾಗಲೇ ಒಂದು ವರ್ಷಗಳ ಪ್ರೊಬೆಷನರಿ ಅವಧಿ ಪೂರೈಸಿರುವ ಪೊಲೀಸ್ ಉಪನಿರೀಕ್ಷಕರುಗಳಿಗೆ ಪ್ರಬಾರ ಠಾಣಾಧಿಕಾರಿಗಳಾಗಿ ನೇಮಿಸಿ, ಹತ್ತು ಮಂದಿಗೆ ವಿವಿಧ ಠಾಣೆಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ ಕರ್ತವ್ಯ ನಿರ್ವಹಣೆಗೆ ಆದೇಶಿಸಿದ್ದಾರೆ.

ಮಡಿಕೇರಿ ನಗರ ಠಾಣೆ ಅಪರಾಧ ವಿಭಾಗಕ್ಕೆ ಆರ್. ಮಂಜುನಾಥ್, ಗ್ರಾಮಾಂತರ ಠಾಣೆಗೆ ಶಿವನಗೌಡ ಜಿ. ಪಾಟೀಲ್, ಸುಂಟಿಕೊಪ್ಪ ಠಾಣೆಗೆ ಬಿ.ಎಂ. ದಿಲೀಪ್ ಕುಮಾರ್ ನೇಮಕಗೊಂಡಿದ್ದಾರೆ. ಸೋಮವಾರಪೇಟೆ ಠಾಣೆಯ ಕಾನೂನು ಸುವ್ಯವಸ್ಥೆ ವಿಭಾಗಕ್ಕೆ ಸಿ. ವಿನಯಕುಮಾರ್, ವೀರಾಜಪೇಟೆ ನಗರ ಠಾಣೆಗೆ ಎಸ್. ಅಭಿಜಿತ್, ಶ್ರೀಮಂಗಲ ಠಾಣೆಗೆ ಎನ್. ಕರಿಬಸಪ್ಪ, ಕುಶಾಲನಗರ ಗ್ರಾಮಾಂತರ ಠಾಣೆಗೆ ಎಸ್. ಮಂಜುನಾಥ್, ಶನಿವಾರಸಂತೆಗೆ ಪ್ರಕಾಶ್ ಎತ್ತಿನಮನೆ ನಿಯುಕ್ತಿಗೊಂಡಿದ್ದಾರೆ.

ಅಲ್ಲದೆ ವೀರಾಜಪೇಟೆ ನಗರ ಠಾಣೆಗೆ ರಸೂಲ್‍ಸಾಬ್ ಗೌಂಡಿ ಹಾಗೂ ಗ್ರಾಮಾಂತರ ಠಾಣೆಗೆ ಜಗದೀಶ್ ದೂಳಶೆಟ್ಟಿ ನಿಯೋಜಿಸಲ್ಪಟ್ಟಿದ್ದಾರೆ.