ಮಡಿಕೇರಿ, ಅ. 13: ಪುತ್ತರಿ ಎಫ್.ಪಿ.ಸಿ.ಎಲ್. ವತಿಯಿಂದ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯ, ಶ್ರೀ ಭಗಂಡೇಶ್ವರ ದೇವಾಲಯ ಹಾಗೂ ತಲಕಾವೇರಿ ದೇವಾಲಯಗಳಿಗೆ ಸ್ವಯಂಚಾಲಿತ ತೀರ್ಥ ವಿತರಣೆ ಯಂತ್ರ ಕೊಡುಗೆಯಾಗಿ ನೀಡಲಾಯಿತು.

ಕೋವಿಡ್-19 ವಿಶ್ವದಾದ್ಯಂತ ಹರಡುತ್ತಿರುವ ಈ ಸಮಯದಲ್ಲಿ ಈ ಯಂತ್ರವು ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಬಹಳಷ್ಟು ಉಪಯೋಗವಾಗಲಿದೆ. ಜಿಲ್ಲೆಯಾದ್ಯಂತ 8 ದೇವಾಲಯಗಳಿಗೆ ಈ ಯಂತ್ರವನ್ನು ಕೊಡುಗೆ ನೀಡಲು ಸಂಸ್ಥೆ ತೀರ್ಮಾನಿಸಿದೆ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ಹೊಟ್ಟೇಂಗಡ ರಾಣಾ ಪೊನ್ನಣ್ಣ ಹೇಳಿದ್ದಾರೆ. ಈ ಸಂದರ್ಭ ಸಂಸ್ಥೆಯ ಅಧ್ಯಕ್ಷ ಸೇರಿದಂತೆ ನಿರ್ದೇಶಕರು ಹಾಜರಿದ್ದರು.